ಬಸ್ ಮತ್ತು ಬೈಕ್ ಡಿಕ್ಕಿ; ಸ್ಥಳದಲ್ಲಿ ಇಬ್ಬರ ದುರ್ಮರಣ

0
42

ಚಿತ್ತಾಪುರ: ಬಸ್ ಹಾಗೂ ದ್ವಿ ಚಕ್ರ ವಾಹನ ಮಧ್ಯೆ ಡಿಕ್ಕಿಯಾಗಿ ಸ್ಥಳದಲ್ಲಿಯೇ ಇಬ್ಬರು ಮೃತ ಘಟನೆ ಚಿತ್ತಾಪುರ-ಸಾತನೂರ ಗ್ರಾಮದ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ತಾಲೂಕಿನ ದಿಗ್ಗಾoವ ಗ್ರಾಮದ ಮರೆಪ್ಪ ತಂದೆ ಆಶಾಪ್ಪ ಶಾಬಾದಿ (65), ಭಾಗಣ್ಣ ತಂದೆ ಶಂಭುಲಿಂಗಪ್ಪ ತಳವಾರ್ (45) ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿಗಳು. ಮೃತಪಟ್ಟ ಇಬ್ಬರು ವ್ಯಕ್ತಿಗಳು ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದಿಂದ ದಂಡಗುಂಡ ಗ್ರಾಮಕ್ಕೆ ಹೋಗಿ ಮರಳಿ ದಿಗ್ಗಾoವ ಗ್ರಾಮಕ್ಕೆ ದ್ವಿ ಚಕ್ರದ ಮೇಲೆ ವಾಪಸ್ಸು ಬರುತ್ತಿರುವಾಗ ಚಿತ್ತಾಪುರದಿಂದ ಯಾಗಾಪುರಕ್ಕೆ ಹೋಗುವ ಬಸ್ ಸಾತನೂರು- ಚಿತ್ತಾಪುರ ಮಧ್ಯ ರಸ್ತೆಯಲ್ಲಿ ಏಕಾಏಕಿ ಬಸ್ಸಿಗೆ ಡಿಕ್ಕಿ ಹೊಡೆದು ಬೈಕ್ ಸವಾರರು ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ.

Contact Your\'s Advertisement; 9902492681

ವಿಷಯ ತಿಳಿದ ತಕ್ಷಣ ಚಿತ್ತಾಪುರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಶೈಲ್ ಅಂಬಾಟೆ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here