ರಾಜಕೀಯ ಮುಖಂಡರಿಗೆ ಸಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡದ ಕಿಡಿಗೇಡಿ ವಿರುದ್ಧ ದೂರು ದಾಖಲು

0
54

ಕಲಬುರಗಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರನ್ನು ಗುರಿಯಾಗಿಸಿಕೊಂಡು ಅಪರಿಚಿತ ವ್ಯಕ್ತಿಯೊಬ್ಬ ಸಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಬಿಡುಗಡೆ ಮಾಡಿರುವುದನ್ನು ದಲಿತ ಸಮನ್ವಯ ಸಮಿತಿ ಅಧ್ಯಕ್ಷರಾದ ವಿಠ್ಠಲ ದೊಡ್ಡಮನಿ ತೀವ್ರವಾಗಿ ಖಂಡಿಸಿ ಅಪರಿಚಿತ ವ್ಯಕ್ತಿ ವಿರುದ್ಧ ಪೋಲಿಸ್ ಮಹಾ ನಿರೀಕ್ಷಕರ ಮೂಲಕ ದೂರು ದಾಖಲು ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ದೊಡ್ಡಮನಿ, ನಮ್ಮ ನಾಯಕರ ವಿರುದ್ಧ ಅತಿ ಅಸಹ್ಯವಾಗಿ ಅಶ್ಲೀಲ ಪದಗಳನ್ನು ಬಳಸಿ ನಿಂದನೆ ಮಾಡಿದಲ್ಲದ್ದೆ ಸಂವಿಧಾನದ 370 ಕಾಯ್ದೆ ಬಗ್ಗೆ ತುಚ್ಯವಾಗಿ ಮಾತನಾಡಿದ್ದಾನೆ. ನಮ್ಮ ಸಮಾಜ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವೈಯಕ್ತಿಕವಾಗಿ ಮನಬಂದಂತೆ ಅಶ್ಲೀಲ ಪದಬಳಕೆ ಮಾಡಿ ಅವಮಾನ ಮಾಡಿದ್ದಾನೆ ಎಂದು ದೂರಿದ್ದಾರೆ.

Contact Your\'s Advertisement; 9902492681

ಇದೇ ವೇಳೆ ಮಾತನಾಡಿದ ಸಮಿತಿಯ ಮುಖಂಡ ದಿನೇಶ್ ದೊಡ್ಡಮನಿ, ಆರೋಪಿ ಪತ್ತೆಗಾಗಿ ಪೋಲಿಸ್ ಮಹಾ ನಿರೀಕ್ಷಕ ಕಲಬುರ್ಗಿ ಇವರಿಗೆ ಸಮಿತಿ ಮುಖಂಡರೆಲ್ಲರು ಇಂದು ಭೇಟಿಯಾಗಿ ಈ ಕೂಡಲೇ ಈ ವ್ಯಕ್ತಿಯನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರ ನೀಡಿ ಆಗ್ರಹಿಸಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂತೋಷ ಮೇಲ್ಮನಿ, ಹನುಮಂತ ಇಟಗಿ, ಸತೀಶ ಮಾಲೆ, ಅಂಬರೀಷ ಅಂಬಲಗಿ, ವಿನೋದ ಕಾಂಬಳೆ, ರವಿ ಡೋಣಿ, ಸುನೀಲ ದಿಕ್ಸಂಗಿ, ರಾಣು ಮುದ್ದನಕರ್, ಅಜಯ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here