ಶಹಾಪುರ: ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರದೇಶದ ಯುವಕರು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಮಖಂಡಿಯ ಮಾಜಿ ಶಾಸಕರು ಹಾಗೂ ಪ್ರಬುದ್ಧ ಗೋಷ್ಠಿಯ ರಾಜ್ಯ ಸಂಚಾಲಕರಾದ ಶ್ರೀಕಾಂತ್ ಕುಲಕರ್ಣಿ ಹೇಳಿದರು.
ಶಹಾಪುರದ ಪ್ರವಾಸಿ ಮಂದಿರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಭಾರತದ ಪ್ರಧಾನ ಮಂತ್ರಿಯವರ ಕನಸು ನನಸಾಗುತ್ತಿದೆ ಭಾರತ ತೀವ್ರಗತಿಯಲ್ಲಿ ಪ್ರಗತಿಯತ್ತ ಸಾಗುತ್ತಿರುವುದು ಸಂತೋಷದ ಸಂಗತಿ ಈ ನಿಟ್ಟಿನಲ್ಲಿ ಯುವಕರೆಲ್ಲರೂ ನರೇಂದ್ರ ಮೋದಿಯವರು ಕೈಗೊಳ್ಳುತ್ತಿರುವ ಕಾರ್ಯ ಕೆಲಸಗಳನ್ನು ಇಡೀ ಭಾರತ ದೇಶವೇ ಮೆಚ್ಚುವಂತೆ ಮಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಡಾ: ಚಂದ್ರಶೇಖರ ಸುಬೇದಾರ, ಅಡಿವಪ್ಪ ಜಾಕಾ ಸಾಹುಕಾರ್, ರಾಜಶೇಖರ ನಗನೂರ ಹಾಗೂ ಇತರರು ಉಪಸ್ಥಿತರಿದ್ದರು.