ಚಂಪಾ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರು ಹರ್ಷ

0
31

ಶಹಾಬಾದ: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ್ ಗೆಲುವು ಸಾಧಿಸಿದ ಹಿನ್ನೆಯಲ್ಲಿ ಕಾಂಗ್ರೆಸ್ ಮುಖಂಡರಾದ ನಾಗಣ್ಣ ರಾಂಪೂರೆ,ಮಹ್ಮದ್ ಅಜರೋದ್ದಿನ್,ಮಹ್ಮದ್ ಇಮ್ರಾನ್, ಅಭಿಷೇಕ ಪಾಟೀಲ ಅವರು ಚಂದ್ರಶೇಖರ ಪಾಟೀಲ್ ಅವರಿಗೆ ಹೂಗುಚ್ಚ ನೀಡಿ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ನಾಗಣ್ಣ ರಾಂಪೂರೆ, ಪದವೀಧರ ಮತದಾರರ ಮತ್ತೊಮ್ಮೆ ಕೈ ಹಿಡಿಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ್ ಅವರಿಗೆ ಗೆಲ್ಲಿಸಿದ್ದಾರೆ. ಎಲ್ಲಾ ಮತದಾರ ಪ್ರಭುಗಳಿಗೆ ಕೃತಜ್ಞತೆ ಸಲ್ಲಿಸುತ್ತೆನೆ.ನಿಮ್ಮ ಸಮಸ್ಯೆಗಳಿಗೆ ಈ ಬಾರಿ ಎಲ್ಲಾ ರಿತೀಯ ಪರಿಹಾರ ಒದಗಿಸುವಲ್ಲಿ ಚಂದ್ರಶೇಖರ ಪಾಟೀಲರು ಕೆಲಸ ನಿರ್ವಹಿಸುತ್ತಾರೆ.

Contact Your\'s Advertisement; 9902492681

ರಾಜ್ಯದಲ್ಲಿ ನಮ್ಮ ಸರಕಾರವಿರುವುದರಿಂದ ಮತ್ತಷ್ಟು ಉತ್ತಮ ಕೆಲಸಗಳು ಮಾಡಲು ಸಹಕಾರಿಯಾಗುತ್ತದೆ.ನಮ್ಮ ನಾಯಕರಾದ ಡಾ.ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ,ಅಜಯ್‍ಸಿಂಗ್, ಅಲ್ಲಮಪ್ರಭು ಪಾಟೀಲ, ಬಿ.ಆರ್. ಪಾಟೀಲ,ಎಂ.ವೈ.ಪಾಟೀಲ, ಮಾಲಿಕಯ್ಯ ಗುತ್ತೆದಾರ ಸೇರಿದಂತೆ ಅನೇಕರ ಸಂಘಟಾತ್ಮಕ ಶಕ್ತಿಯಿಂದ ಇಂದು ಮತ್ತೆ ಹಿಂದಿನ ವೈಭವವನ್ನು ಕಾಂಗ್ರೆಸ್ ಪಕ್ಷದಲ್ಲಿ ಕಾಣುತ್ತಿದ್ದೆವೆ. ಬಿಜೆಪಿಯ ದುರಾಢಳಿತಕ್ಕೆ ಬೇಸತ್ತು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಹೆಚ್ಚು ಸ್ಥಾನವನ್ನು ನೀಡಿದ್ದಾರೆ.

ಮೋದಿ ಹವಾ ಸಂಪೂರ್ಣ ಪಂಚರ್ ಆಗಿದೆ.ಸುಳ್ಳು ಹೇಳುವ ಭರವಸೆ ನೀಡುವ, ಜಾತಿ-ಧರ್ಮದ ಹೆಸರಿನಲ್ಲಿ ಕೋಮು ಭಾವನೆ ಉಂಟು ಮಾಡುವ ಪಕ್ಷದವರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ.ಕಾಂಗ್ರೆಸ್ ಪಕ್ಷವನ್ನು ಮತದಾರರು ಕೈಹಿಡಿದಿದ್ದಾರೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here