ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ ಬಯಸುತ್ತೇನೆ; ಶಾಸಕ ಆರ್ ವಿ ನಾಯಕ್

0
4

ಸುರಪುರ; ಹಿಂದೆ ನಮ್ಮ ತಂದೆಯವರು ಇದ್ದಾಗ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ, ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ ಬಯಸುವೆ ಎಂದು ನೂತನ ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಹಿಂದೆ ನಮ್ಮ ತಂದೆಯವರು ಇದ್ದಾಗ ಅವರೊಂದಿಗೆ ಕ್ಷೇತ್ರದಲ್ಲಿ ಸಂಚರಿಸಿ ಅವರು ಮಾಡುತ್ತಿದ್ದ ಕಾರ್ಯಗಳು, ಸಾರ್ವಜನಿಕರೊಂದಿಗೆ ಅವರಿಗಿದ್ದ ಒಡನಾಟ ಹಾಗೂ ಜನರ ಸಮಸ್ಯೆಗಳಿಗೆ ಅವರು ಸ್ಪಂದಿಸುತ್ತಿದ್ದ ರೀತಿ ಎಲ್ಲವನ್ನು ಕೂಡ ನೋಡಿ ಬೆಳೆದಿದ್ದೇನೆ,ಮುಂದೆಯೂ ಅವರ ಆದರ್ಶವನ್ನು ಇಟ್ಟುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುವೆ ಪತ್ರಕರ್ತರು ಕೂಡ ಸದಾ ಕಾಲ ತಮ್ಮ ಸಲಹೆ ನೀಡುವಂತೆ ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಶಾಸಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ಗಿರೀಶ್ ಶಾಬಾದಿ ಯು,ಅಧ್ಯಕ್ಷ ಸಿದ್ದಯ್ಯ ಪಾಟೀಲ, ಹಿರಿಯಾಯ ಪತ್ರಕರ್ತ ಧೀರೇಂದ್ರ ಕುಲಕರ್ಣಿ, ಅಶೋಕ ಸಾಲವಾಡಗಿ, ಮಲ್ಲು ಗುಳಗಿ,ರಾಜು ಕುಂಬಾರ, ಶ್ರೀಕರ ಜೋಷಿ,ನಾಗರಾಜ ನ್ಯಾಯಮೂರ್ತಿ, ಕಲೀಮ್ ಫರೀದಿ, ಪರಶುರಾಮ ಮಲ್ಲಿಬಾವಿ, ಪುರುಷೋತ್ತಮ ನಾಯಕ ದೇವತ್ಕಲ್,ಹೊನ್ನಪ್ಪ ತೇಲ್ಕರ್ ಮುರಳಿಧರ ಅಂಬುರೆ, ಶ್ರೀಮಂತ ಚಲುವಾದಿ, ನಾಗಭೂಷಣ ಯಾಳಗಿ, ಥಾಮಸ್ ಮ್ಯಾಥ್ಯೂ,ಮಲ್ಲು ಬಾದ್ಯಾಪುರ ಮುಖಂಡರಾದ ಚಂದ್ರಶೇಖರ್ ದಂಡಿನ್ ಹಣಮಂತ್ರಾಯ ಮಕಾಶಿ, ಪರಶುರಾಮ ಮಂಗಿಹಾಳ,ಬಸವರಾಜ ಜಾಲಿಬೆಂಚಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here