ಸುರಪುರ: ನಗರದ ಶಿಕ್ಷಕರ ಕಲಿಕಾ ಕೇಂದ್ರ ತಿಮ್ಮಾಪುರದಲ್ಲಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಪರಿಸರ ಸಂರಕ್ಷಣೆಗಾಗಿ ನಮ್ಮ ಪ್ರಯತ್ನಗಳು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಅನೇಕ ಯೋಚನೆಗಳು,ನೀರಿನ ಸಂರಕ್ಷಣೆ, ಗಿಡಮರಗಳ ಬೆಳೆಸುವಿಕೆ ಹಾಗೂ ಘನ ತ್ಯಾಜ್ಯಗಳನ್ನು ವಿಲೇವಾರಿ ಕುರಿತು ಜಾಗೃತಿಯನ್ನು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಕುರಿತಾದ ಪೋಸ್ಟರ್ಗಳ ಮೂಲಕ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ನ ಸಂಪನ್ಮೂಲ ವ್ಯಕ್ತಿ ಅನ್ವರ್ ಜಮಾದಾರ್ ಮಾತನಾಡುತ್ತ, ಪರಿಸರ ಸಂರಕ್ಷಣೆ ಕಾಳಜಿ ಕೇವಲ ಜೂನ್ 5 ಕ್ಕೆ ಸೀಮಿತಗೊಳ್ಳದೆ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿರಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಕೃಷ್ಣ ಬಿಜಾಪುರ್,ರಾಜಶೇಖರ್, ಇಲ್ಯಾಸ್, ಪರಮಣ್ಣ, ಗುರುರಾಜ್ ಕುಲಕರ್ಣಿ,ಹುಲಗಪ್ಪ, ಚೆನ್ನಪ್ಪ ,ಲೊಹಿತಾಶ್ವ ,ಅನುಷಾ, ಹರೀಶ್, ಸಚಿನ್, ಭೀಮಣ್ಣ,ರವಿಚಂದ್ರನ್, ಸಂತೋಷ್, ಸಾಬೀರ್ ,ಪವಿತ್ರ ,ಅಪೂರ್ವ, ಸಿದ್ದನಗೌಡ ಭಾಗವಹಿಸಿದ್ದರು.