ರೈತರು ಸರಕಾರದ ಸೌಲಭ್ಯ ಸದುಪಯೋಗ ಮಾಡಿಕೊಳ್ಳಬೇಕು; ಆರ್.ವಿ.ನಾಯಕ

0
13

ಸುರಪುರ: ಸರಕಾರ ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ನೀಡಿದೆ ರೈತರು ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.

ನಗರದ ಪಿಎಲ್‍ಡಿ ಬ್ಯಾಂಕ್‍ನಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿ,ನಮ್ಮ ತಂದೆಯವರಾದ ರಾಜಾ ವೆಂಕಟಪ್ಪ ನಾಯಕ ಅವರು ಸದಾಕಾಲ ರೈತರಿಗಾಗಿ ನಿರಂತರವಾಗಿ ಶ್ರಮಿಸಿದ್ದರು,ಅವರ ಸೇವೆಯನ್ನು ಮುಂದುವರೆಸಿಕೊಂಡು ಹೋಗಲು ತಾವೆಲ್ಲರು ಸದಾಕಾಲ ಸಹಕಾರ ನೀಡುವಂತೆ ಮನವಿ ಮಾಡಿದರು.

Contact Your\'s Advertisement; 9902492681

ನಂತರ ಪಿಎಲ್‍ಡಿ ಬ್ಯಾಂಕ್ ವತಿಯಿಂದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಅನೇಕ ಜನ ರೈತರಿಗೆ ಪಿಎಲ್‍ಡಿ ಬ್ಯಾಂಕ್ ವತಿಯಿಂದ ನೀಡುವ ಸಾಲದ ಚೆಕ್‍ಗಳ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ್ ದೇವಾಪುರ,ಉಪಾಧ್ಯಕ್ಷ ನಿಂಗಣ್ಣ ಕೆಂಗುರಿ,ನಿರ್ದೇಶಕರಾದ ವಾಮನರಾವ್ ದೇಶಪಾಂಡೆ,ರಾಜಾ ಸುಭಾಶ್ಚಂದ್ರ ನಾಯಕ,ಬಸಣ್ಣ ಕಮತಗಿ ಕಕ್ಕೇರ,ವೆಂಕೋಬ ಸಾಹುಕಾರ ,ಬಸವರಾಜ ಬಾಗಲಿ,ಮಲ್ಲಣ್ಣ ಸಾಹುಕಾರ,ನಂದನಗೌಡ ಹೆಚ್.ಪಾಟೀಲ್,ಶರಣಗೌಡ ಪಾಟೀಲ್,ಶರಣಗೌಡ ಬಿರಾದಾರ,ಎಮ್.ಡಿ.ಯೂಸೂಫ್,ಶಾಂತಗೌಡ,ಸಿದ್ದನಗೌಡ,ರಾಜಶೇಖರ ದಾಯಗೊಡೆ,ನಿಂಗಣ್ಣ,ಶಿವರಾಜ,ತೋಟೆಂದ್ರ,ಶರಣಯ್ಯಸ್ವಾಮಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here