ವಚನ ವಿಚಾರಗಳು ಕೇವಲ‌ ಆಚರಣೆಗೆ ಸೀಮಿತವಾಗದೆ ಅನುಸರಣೆಯಲ್ಲಿ ಬರಬೇಕು

0
39

ಕಲಬುರಗಿ: ಅಂಧಶ್ರದ್ಧೆ, ಮೂಢನಂಬಿಕೆ ವಿರುದ್ಧ ಹೋರಾಡಿದ ಬಸವಣ್ಣನವರು ಲೋಕಪೂಜ್ಯರು. ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಶಾಬಾದಿ ಅಭಿಪ್ರಾಯಪಟ್ಟರು.

891ನೇ ಬಸವ ಜಯಂತ್ಯುತ್ಸವ ನಿಮಿತ್ತವಾಗಿ ಇಲ್ಲಿನ
ಶ್ರೀ ಸದ್ಗುರು ಕಲಾ ಸಂಸ್ಥೆ ವತಿಯಿಂದ ಶಿವಾಜಿ ನಗರದ ಬಸವಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ವಚನ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನುಭವ ಮಂಟಪದ ಮೂಲಕ ಜನರಲ್ಲಿ ವೈಜ್ಞಾನಿಕ, ವೈಚಾರಿಕ ಮನೋಭಾವನೆ ಮೂಡಿಸಿದ ಮಹಾತ್ಮರು. ಅಂಥ ಮಹಾತ್ಮರ ಜಯಂತಿಯನ್ನು ಬಹಳಷ್ಟು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಕರೆ ನೀಡಿದರು.

Contact Your\'s Advertisement; 9902492681

ಮುಖ್ಯ ಅತಿಥಿಯಾಗಿದ್ದ ಜ್ಯೋತಿಬಾ ಫುಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಎಸ್ಎಸ್ ವಿ ಚಾನಲ್ ಸಂಸ್ಥಾಪಕ ಶಂಕರ ಕೋಡ್ಲಾ ಮಾತನಾಡಿ, ಬಸವಾದಿ ಶರಣರು ಬದುಕಿ, ಬೋಧಿಸಿದ ವಿಚಾರಗಳು ಪಕ್ಕಾ ವಾಸ್ತವವಾಗಿವೆ. ಮೇಲಾಗಿ ಸರಳ, ಸಹಜವಾಗಿವೆ. ಶರಣರ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವಚನ ವಿಚಾರಗಳು ಕೇವಲ ಆಚರಣೆಯಾಗಬಾರದು, ಅನುಸರಣೆ ಮಾಡಬೇಕು ಎಂದು ತಿಳಿಸಿದರು.

ಮಹಾಂತೇಶ ಕುಂಬಾರ ಅವರು ಬಸವಣ್ಣನವರ ಕುರಿತಾಗಿ ವಿಶೇಷ ಅನುಭಾವ ನೀಡಿದರು. ಬಸವಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಶಿವಾನಂದ ಬಿಲಗುಂದಿ, ಗುರುಬಸವ ಡಿಸ್ಟ್ರಿಬ್ಯೂಟರ್ಸ್ ನ ಕಲ್ಯಾಣಕುಮಾರ ಸಗರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನಂತರ ನಡೆದ ವಚನ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ದತ್ತರಾಜ ಕಲಶೆಟ್ಟಿ, ರಾಚಯ್ಯ ಸ್ವಾಮಿ ರಟಕಲ್, ಬಸಯ್ಯ ಗುತ್ತೇದಾರ, ಭೀಮಾಶಂಕರ ಹೂಗಾರ, ಜಗದೀಶ ದೇಸಾಯಿ ಕಲ್ಲೂರ, ಭಗವಂತರಾವ ಕಣ್ಣೂರ, ಮೌನೇಶ ವಿಶ್ವಕರ್ಮ, ಸೂರ್ಯಕಾಂತ ಗೊಬ್ಬೂರವಾಡಿ ಮತ್ತಿತರ ಕಲಾವಿದರಿಂದ ವಚನ ಸಂಗೀತೋತ್ಸವ ಕಾರ್ಯಕ್ರಮ ಜರುಗಿತು.

ಲೀಲಾವತಿ ಚಂದ್ರಕಾಂತ ಗೋಗಿ ನಿರೂಪಿಸಿದರು. ಶಿವಲಿಂಗ ಕೆಂಗನಾಳ ಸ್ವಾಗತಿಸಿದರು. ತೇಜು ಎಸ್ವಿ. ನಾಗೋಜಿ ಪ್ರಾರ್ಥನೆಗೀತೆ ಹಾಡಿದರು. ‌ವಿಜಯಲಕ್ಷ್ಮೀ ಕೆಂಗನಾಳ ವಂದಿಸಿದರು.

ಸದ್ಗುರು ಕಲಾ ರತ್ನ ಪ್ರಶಸ್ತಿ ಪುರಸ್ಕೃತರು: ಇದೇ ವೇಳೆಯಲ್ಲಿ ಉದಯಕುಮಾರ ಸಾಲಿ, ರಾಜಕುಮಾರ ಕೋಟಿ, ಡಾ. ಶಿವರಂಜನ ಸತ್ಯಂಪೇಟೆ, ಸಿದ್ಧರಾಮ ಯಳವಂತಗಿ, ಶಿವಶರಣಪ್ಪ ದೇಗಾಂವ, ಚಂದ್ರಕಾಂತ ಎಂ. ಗುಳಗಿ ಅವರಿಗೆ ಸದ್ಗುರು ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here