ಮಾದಕ ವಸ್ತು ಸೇವನೆ ಜೀವಕ್ಕೆ ಅಪಾಯ;ಡಿವೈಎಸ್ಪಿ ಜಾವಿದ್

0
25

ಸುರಪುರ: ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶ ರಾಯಚೂರ ವಿಶ್ವವಿದ್ಯಾಲಯ ರಾಯಚೂರ ಇವರ ಸಂಯುಕ್ತಾಶ್ರಯದಲ್ಲಿ 2023-24ನೇ ಸಾಲಿನ ವಾರ್ಷಿಕ ಶಿಬಿರದ ಉದ್ಘಾಟನೆ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಇದೇ ಸಂದರ್ಭದಲ್ಲಿ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಟ ವಿರುದ್ಧ ಅಂತರಾಷ್ಟ್ರೀಯ ದಿವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುರಪುರ ಪೊಲೀಸ್ ಉಪ ವಿಭಾಗದ ಉಪಾಧೀಕ್ಷಕ ಜಾವಿದ್ ಇನಾಂದಾರ್ ಮಾತನಾಡಿ,ಎನ್.ಎಸ್.ಎಸ್ ಎನ್ನುವುದು ವಿದ್ಯಾರ್ಥಿಗಳಿಗೆ ಮುಖ್ಯವಾದುದಾಗಿದೆ,ಇದರಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ,ಪರಿಸರ ಕಾಳಜಿ,ಸ್ವಚ್ಛತೆ ಕುರಿತು ಅರಿವು ಮೂಡಿಸಲು ಸಾಧ್ಯ ಎಂದರು.

Contact Your\'s Advertisement; 9902492681

ಅಲ್ಲದೆ ಮಾದಕ ವಸ್ತುಗಳ ಸೇವನೆ ಎನ್ನುವುದು ಆರೋಗ್ಯಕ್ಕೆ ಹಾನಿಕಾರಕ ಮಾದಕ ವಸ್ತು ಸೇವನೆಯಿಂದ ಎಲ್ಲರು ದೂರವಿರಬೇಕು ಎಂದರು. ಅಲ್ಲದೆ ಮಾದಕ ವಸ್ತುಗಳ ಸಾಗಾಟ ಕಾನೂನು ಬಾಹಿರ ಚಟುವಟಿಕೆಯಾಗಿದೆ,ಇದರ ವಿರುದ್ಧ ಎಲ್ಲರು ಜಾಗೃತರಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲ ಆನಂದಕುಮಾರ ಜೋಶಿ ಮಾತನಾಡಿ,ರಾಷ್ಟ್ರೀಯ ಸೇವಾ ಯೋಜನೆ ಮೂಲಕ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡಿಸುವುದು ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿಯ ಜೊತೆಗೆ ಪರಿಸರ ಕಾಳಜಿಯೂ ಮೂಡಿಸಲಾಗುವುದು,ಆ ನಿಟ್ಟಿನಲ್ಲಿ 2023-24ನೇ ಸಾಲಿನ ಶಿಬಿರವನ್ನು ಇಂದು ಉದ್ಘಾಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ನಂತರ ಮಹಾವಿದ್ಯಾಲಯದ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರು ಹಾಕುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮದ ವೇದಿಕೆಯಲ್ಲಿ ಪಿ.ಐ ಆನಂದ ವಾಗಮೊಡೆ ಭಾಗವಹಿಸಿ ಮಾತನಾಡಿದರು,ಎನ್.ಎಸ್.ಎಸ್. ಅಧಿಕಾರಿ ಬಲಭೀಮ ದೇಸಾಯಿ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ವಿಶ್ವನಾಥರಡ್ಡಿ ಉಪಸ್ಥಿತರಿದ್ದರು,ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹೆಚ್.ಎಮ್.ವಗ್ಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು,ಉಪನ್ಯಾಸಕ ದೇವು ಎಸ್.ಹೆಬ್ಬಾಳ ನಿರೂಪಿಸಿದರು,ಶಾಂತು ನಾಯಕ ಸ್ವಾಗತಿಸಿದರು.ನಮ್ರತಾ ಪ್ರಾರ್ಥಿಸಿದರು,ಡಾ.ಕೃಷ್ಣಾ ವಂದಿಸಿದರು.

ಪ್ರಾಧ್ಯಾಪಕರಾದ ಪ್ರಮೋದ ಕುಲಕರ್ಣಿ,ಬಸವರಾಜ ಭಂಡಾರಿ,ಡಾ.ಕಾಶಮ್ಮ,ನೀಲಮ್ಮ ಮಹಾಂತೇಶ ಸುಬೇದಾರ ಅಧೀಕ್ಷಕರಾದ ರೂಪಲಕ್ಷ್ಮೀ,ಅಪ್ಸಾನ್ ಬೇಗಂ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಪರಿಸರ ಜಾಗೃತಿ ಹಾಗೂ ಮಾದಕ ವಸ್ತು ಸಾಗಾಟ ವಿರೋಧದ ಕುರಿತು ಎಲ್ಲರು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here