ಈ ಜುಸ್ಪರ್ಧೆ ಪದಕ ವಿಜೇತ ಶಂಕರ ಕವಲಗಿಗೆ ಸನ್ಮಾನ

0
8

ಕಲಬುರಗಿ: ಕ್ಯೂಕುಶಿನ್ ಕರಾಟೆ ಶಾಲೆ ವತಿಯಿಂದ ಇತ್ತೀಚೆಗೆ ರಾ?ಮಟ್ಟದ ಈಜು ಸ್ಪರ್ಧೆಯಲ್ಲಿ ಕಂಚಿನ ಪದಕ ವಿಜೇತರಾದ, ಶಾಲೆಯ ಹಳೆ ವಿದ್ಯಾರ್ಥಿ ಶಂಕರ್ ಕವಲಗಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ನಗರದ ವಿ ಜಿ ಅಂದಾನಿ ಆರ್ಟ್ ಕಾಲೇಜಿನಲ್ಲಿ ಕ್ಯೂಕುಶಿನ್ ಕರಾಟೆ ಶಾಲೆಯ ೨೮ನೇ ಬೆಲ್ಟ್ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ, ಶಾಲೆಯಲ್ಲಿ ನೀಡಲಾಗಿದ್ದ ಕರಾಟೆ ತರಬೇತಿ ಪೂರ್ಣಗೊಳಿಸಿದ ೪೦ ವಿದ್ಯಾರ್ಥಿಗಳಿಗೆ ವಿವಿಧ ರೀತಿಗಳ ಗ್ರೇಡ್ ಗಳ ಬ್ರೌನ್, ಯೆಲ್ಲೋ, ಗ್ರೀನ್, ಅರೇಂಜ್ ಬೆಲ್ಟ್ ಹಾಗೂ ಪ್ರಮಾಣ ಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಸದಸ್ಯ ಅಬ್ದುಲ್ ರೆಹಮಾನ್, ಕರಾಟೆ ಶಾಲೆ ಮುಖ್ಯಸ್ಥ, ತರಬೇತುದಾರ ಸುನಿಲಕುಮಾರ್ ಬೆಟ್ಟಜೇವರ್ಗಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here