ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಕಠಿಣ ಕ್ರಮ:ಡಿವೈಎಸ್.ಪಿ ಎಚ್ಚರಿಕೆ

0
179

ವಾಡಿ; ಮೊಹರಂ ಹಬ್ಬವು ಅಸಂಖ್ಯಾತ ಹಿಂದೂ–ಮುಸ್ಲಿಮ್‌ ರ ಸೌಹಾರ್ದತೆಯ ಸಂಕೇತವಾಗಿದೆ. ಯಾವುದೇ ಕ್ಷುಲ್ಲಕ ವಿಷಯ, ಹಳೆವೈಷಮ್ಯದ ಕಾರಣದಿಂದ ಹಿಂಸಾಚಾರಕ್ಕೆ ಉತ್ತೇಜನ ನೀಡಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮಜರುಗಿಸಲಾಗುವುದು. ಎಂದು ಶಹಾಬಾದ್ ಪೊಲೀಸ್ ವಿಭಾಗದ ಡಿವೈಎಸ್.ಪಿ ಶಂಕರಗೌಡ ಪಾಟೀಲ ಹೇಳಿದರು.

ಪಟ್ಟಣ ಸಮೀಪದ ಇಂಗಳಗಿ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಆಯೋಜಿಸಿದ ಕಾನೂನು ಅರಿವು ಮತ್ತು ಸಾರ್ವಜನಿಕ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ದೇಶದಲ್ಲಿ ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿವೆ. ಯಾವುದೇ ಜಾತಿ, ಧರ್ಮ ಎನ್ನದೇ ಎಲ್ಲರೂ ಸೇರಿ ಸಮಸ್ಯೆಯಾಗದಂತೆ ಹಬ್ಬ ಆಚರಿಸಬೇಕು. ಕೋಮು ಗಲಾಭೆಗೆ ಅವಕಾಶ ನೀಡಬಾರದು ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.

Contact Your\'s Advertisement; 9902492681

ಅಕ್ರಮ ಗಾಂಜಾ ದಂಧೆಗೆ ತಡೆ; ಶಾಲೆ ಕಾಲೇಜು ಬಳಿ ಹುಡುಗಿಯರನ್ನು ರೇಗಿಸುವ ಕಿಡಿಗೇಡಿಗಳ ಮತ್ತು ಗಾಂಜಾ ಮಾರಾಟಕ್ಕೆ ಕಡಿವಾಣ ಹಾಗೂ ಗ್ರಾಮೀಣ ಭಾಗದ ಸಾಕು ಪ್ರಾಣಿಗಳ ಕಳವು ನಿಯಂತ್ರಣಕ್ಕೆ ಗಸ್ತು ವ್ಯವಸ್ಥೆ ಹೆಚ್ಚಿಸಲಾಗಿದೆ. ತುರ್ತು ಸಂದರ್ಭದಲ್ಲಿ ಸಹಾಯವಾಣಿ 112 ಸಂಖ್ಯೆಗೆ ಕರೆಮಾಡಿದರೆ ಪೊಲೀಸ್‌ ಸಿಬ್ಬಂದಿ ಸ್ಪಂದಿ ತಕ್ಷಣ ಸ್ಪಂದಿಸುತ್ತಾರೆ. ಅನೈತಿಕ ಮತ್ತು ಅಕ್ರಮ ಚಟುವಟಿಕೆಗಳ ಮಾಹಿತಿ ನೀಡಿ ಗೋಪ್ಯತೆ ಇರಲಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಸ್ಥಳೀಯ ಆಡಳಿತ ಹಾಗೂ ಸಾರ್ವಜನಿಕರೇ ಮುಂದಾಗಬೇಕು ಎಂದು ಸರ್ಕಲ್ ಇನ್ಸ್.ಪೆಕ್ಟರ್ ಚಂದ್ರಶೇಖರ ತಿಗಡಿ ಹೇಳಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಅತಿ ಸೂಕ್ಷ್ಮ ಇರುವ ಗ್ರಾಮಗಳಲ್ಲಿ ವಿವಿಧ ರೀತಿಯ ಅಪರಾಧಗಳ ಕುರಿತು ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲು, ಸಾರ್ವಜನಿಕ ಜನ ಸಂಪರ್ಕ ಸಭೆ ನಡೆಸಲಾಗುತ್ತಿದೆ. ಇದರಲ್ಲಿ ಡಿವೈಎಸ್.ಪಿ ಸೇರಿದಂತೆ ಇಡೀ ಆಯಾ ಭಾಗದ ಪೊಲೀಸ್ ಇಲಾಖೆ ಸಿಬ್ಬಂದಿ ಭಾಗವಹಿಸುತ್ತಾರೆ. ಯಾವುದೇ ಸಮಸ್ಯೆ ಇದ್ದರೇ ಸ್ಥಳದಲ್ಲೇ ಬಗೆಹರಿಸಲಾಗುತ್ತದೆ ಎಂದು ಶಂಕರಗೌಡ ಪಾಟೀಲ ತಿಳಿಸಿದರು.

ಅಗತ್ಯಕ್ಕಿಂತ ಹೆಚ್ಚು ಚಿನ್ನಾಭರಣ, ಹಣ ಇದ್ದರೇ ಯಾವುದೇ ಕಾರಣಕ್ಕೆ ಮನೆಯಲ್ಲಿ ಇಡಬಾರದು. ಬ್ಯಾಂಕ್ ಸೇಫರ್ ಲಾಕರ್ ನಲ್ಲಿ ಇಡಬೇಕು. ಬಹುತೇಕ ಅಪಘಾತಗಳಿಗೆ ದ್ವಿಚಕ್ರ ವಾಹನಗಳೇ ಕಾರಣವಾಗುತ್ತಿವೆ. ವಾಹನ ಖರೀದಿಸುವಾಗ ಮಾಲೀಕರು ಅಗತ್ಯ ದಾಖಲೆಗಳನ್ನು ಪರಿಶೀಲನೆ ಮಾಡಿ, ಖರೀದಿ ಮಾಡಬೇಕು ಹಾಗೆ ಪ್ರಭುತ್ವ ಹೊಂದದ ಮಕ್ಕಳಿಗೆ ವಾಹನ ನೀಡಿದರೇ ಪಾಲಕರ ವಿರುದ್ಧವೇ ಪ್ರಕರಣ ದಾಖಲಿಸಲಾಗುತ್ತದೆ. ಎಂದು ಎಚ್ಚರಿಕೆ ನೀಡಿದರು.

ವಾಡಿ ಪೊಲೀಸ್ ಠಾಣೆ ಸಬ್.ಇನ್ಸ್.ಪೆಕ್ಟರ್ ಕೆ.ತಿರುಮಲೇಶ ಮಾತನಾಡಿದರು. ಗ್ರಾಮದ ಮುಖಂಡರಾದ ಅಣ್ಣರಾಣ ಪಾಟೀಲ, ಬಸವರಾಜ ಸ್ಥಾವರಮಠ, ಗ್ರಾಂ.ಪಂಚಾಯಿತಿ ಅಧ್ಯಕ್ಷೆ ಅನಿತಾ ನಾಟೀಕಾರ, ಕಾರ್ಯದರ್ಶಿ ಸಂಗಮೇಶ ಹೀರೆಮಠ, ಗೌಸ್ ದುದ್ದನಿ, ಮಲ್ಲಿಕಾರ್ಜುನ ಸಿಮಿ, ಮಲ್ಲಪ್ಪ ನಾಟೀಕಾರ, ಸಮದ್, ಬಬಲು ಮುಲ್ಲಾ, ಕಲ್ಲಪ್ಪ ನಾಟೀಕಾರ, ಸಾಬಣ್ಣಾ ಪೂಜಾರಿ, ಶ್ರೀಶೈಲ ನಾಟೀಕಾರ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here