Monday, August 5, 2024
ಮನೆಬಿಸಿ ಬಿಸಿ ಸುದ್ದಿಡಾ. ತಳವಾರ ಸಾಬಣ್ಣಾ ಅವರಿಂದ ದೇವಸ್ಥಾನಕ್ಕೆ 13 ಲಕ್ಷ ಅನುದಾನ: ಶಾಂತಪ್ಪಾ ಕೂಡಿ ಅಭಿನಂದನೆ

ಡಾ. ತಳವಾರ ಸಾಬಣ್ಣಾ ಅವರಿಂದ ದೇವಸ್ಥಾನಕ್ಕೆ 13 ಲಕ್ಷ ಅನುದಾನ: ಶಾಂತಪ್ಪಾ ಕೂಡಿ ಅಭಿನಂದನೆ

ಕಲಬುರಗಿ: ಶ್ರೀ ರೇಣುಕಾ ದೇವಿ.ಯಲ್ಲಮ್ಮ ದೇವಸ್ಥಾನದ ರಂಗ ಮಂಟಪಕ್ಕೆ 13 ಲಕ್ಷ ರೂ ಮಂಜುರು ಮಾಡಿದ್ದಕ್ಕೆ ಗಂಗಾನಗರ ಬಡಾವಣೆ ಪರವಾಗಿ ನಿಜಶರಣ ಅಂಬಿಗರ ಚೌಡಯ್ಯ ಜಿರ್ಣೊದ್ದಾರ ಸಂಘದ ಪರವಾಗಿ ವಿಧಾನ ಪರಿಷತ್ ಸದಸ್ಯ ಡಾ. ತಳವಾರ ಸಾಬಣ್ಣಾಗೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಾಂತಪ್ಪಾ ಕೂಡಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

ಗಂಗಾ ನಗರದಲ್ಲಿ ಶ್ರೀ ರೇಣುಕಾ ದೇವಿ ಯಲ್ಲಮ್ಮನ ದೇವಸ್ಥಾನ ನವ ನಿರ್ಮಾಣದ ಉದ್ಘಾಟನೆ  ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಡಾ. ತಳವಾರ ಸಾಬಣ್ಣಾ ಅವರು ದೇವಸ್ಥಾನ ಉಳಿದ ಆವರಣದಲ್ಲಿ ರಂಗಮಂಟಪವು ಬಡಜನರಿಗೆ ಸಂಸ್ಕøತಿಯ ಕಾರ್ಯಕ್ರಮಗಳು ಮತ್ತು ಬಡಾವಣೆಯ ಕಡು ಬಡವರಿಗೆ ಮದುವೆ ಮುಂಜೆ ಮಾಡಿ ಕೊಂಡು ಹೊಗಲು ತಮ್ಮ ವಿಧಾನ ಪರಿಷತ್ ಸದಸ್ಯರು ಅನುದಾನದಲ್ಲಿ ನಿರ್ಮಿಸಿ ಕೂಡ ಬೇಕೆಂದು ಬಡಾವಣೆಯ ನಾಗರಿಕರ ಪರವಾಗಿ ಮನವಿ ಮಾಡಿಕೊಂಡಾಗ ಸಮಾರಂಭದಲ್ಲಿ ತಮ್ಮ ಅನುದಾನದಲ್ಲಿ 2023-24ನೇ ಸಾಲಿನ ಅನುದಾನ ಕೂಡುವುದಾಗಿ ಮಾತು ಕೊಟ್ಟಂತೆ ವಿಧಾನ ಪರಿಷತ್ ಸದಸ್ಯರು ಅನುದಾನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಶೀಘ್ರವೇ ದೇವಸ್ಥಾನ ಆವರಣದಲ್ಲಿ ರಂಗ ಮಂಟಪದ ಅಡಿಗಲ್ಲು ಸಮಾರಂಭವನ್ನು ಬಡಾವಣೆಯ ಹಿರಿಯ ಮುಖಂಡರನ್ನು ಶ್ರೀ ಅಂಬಿಗರ ಚೌಡಯ್ಯ ಜಿರ್ಣೋದ್ದಾರ  ಸಂಘ ಸಭೆ ಕರೆದು ದಿನಾಂಕ ನಿಗದಿ ಪಡಿಸಲಾಗುವುದು ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular