Tuesday, August 6, 2024
ಮನೆಬಿಸಿ ಬಿಸಿ ಸುದ್ದಿಪತ್ರಕರ್ತ ವೆಂಕಟೇಶ ಮಾನು ಇನ್ನಿಲ್ಲ

ಪತ್ರಕರ್ತ ವೆಂಕಟೇಶ ಮಾನು ಇನ್ನಿಲ್ಲ

ಕಲಬುರಗಿ: ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ನಿವಾಸಿ, ಹಿರಿಯ ಪತ್ರಕರ್ತ ವೆಂಕಟೇಶ ಮಾನು (೫೪) ಶುಕ್ರವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಸಂಯುಕ್ತ ಕರ್ನಾಟಕ, ವಿಜಯಕರ್ನಾಟಕ, ದಿ ಡೈಲಿ ನ್ಯೂಸ್ ಪತ್ರಿಕೆಗಳಲ್ಲಿ ಕಲಬುರಗಿ, ಬೆಂಗಳೂರು, ಮಂಗಳೂರಿನಲ್ಲಿ ವರದಿಗಾರ, ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.

ಮನೋವಿಜ್ಞಾನ ಉಪನ್ಯಾಸಕರು ಆಗಿದ್ದರು. ಬುಕ್ ಬ್ರಹ್ಮ ವೆಬ್‌ಸೈಟ್, ಬೆಂಗಳೂರಿನ ಅಧಮ್ಯ ಚೇತನ ಸಂಸ್ಥೆಯಲ್ಲೂ ಕೆಲಸ ನಿರ್ವಹಿಸಿದ್ದರು. ಶಹಾಪುರ ಪಟ್ಟಣದ ಸ್ವಕುಳಸಾಳಿ ಸಮಾಜದ ರುದ್ರಭೂಮಿಯಲ್ಲಿ ಬೆಳಗ್ಗೆ ೯ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular