ದಲಿತ ವಿಮೋಚನಾ ಸೇನೆ ತಾಲೂಕ ಅಧ್ಯಕ್ಷರಾಗಿ ಶರಣು ಅನಸೂರ ನೇಮಕ

0
14

ಸುರಪುರ: ನಗರದ ದೀವಳಗುಡ್ಡದಲ್ಲಿಯ ದಲಿತ ವಿಮೋಚನಾ ಸೇನೆ ಸಂಘಟನೆಯ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಡಿಮಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಂಘಟನೆಯ ತಾಲೂಕ ಅಧ್ಯಕ್ಷರನ್ನಾಗಿ ನ್ಯಾಯವಾದಿ ಶರಣಪ್ಪ ಅನಸೂರ ಅವರನ್ನು ನೇಮಕಗೊಳಿಸಲಾಗಿದೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಡಿಮಟ್ಟಿ ಮಾತನಾಡಿ,ಇಂದು ದೇಶದಲ್ಲಿನ ದಲಿತ ಶೋಷಿತರ ಸ್ಥಿತ ಗಂಭೀರವಾಗಿದೆ.ಆಡಳಿತ ನಡೆಸುವ ಸರಕಾರಗಳು ದಲಿತರ ಏಳಿಗೆಗೆ ಯಾವುದೇ ಯೋಜನೆಗಳನ್ನು ನೀಡುತ್ತಿಲ್ಲ.ಅಲ್ಲದೆ ನಮಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ,ಇವುಗಳನ್ನು ಪಡೆದುಕೊಳ್ಳಲು ನಾವೆಲ್ಲರು ಸಂಘಟಿತರಾಗಿ ಹೋರಾಟ ಮಾಡುವ ಅನಿವಾರ್ಯವಿದೆ.ಆದ್ದರಿಂದ ಇಂದು ನಮ್ಮ ದಲಿತ ವಿಮೋಚನಾ ಸೇನೆಯ ಸುರಪುರ ತಾಲೂಕ ಘಟಕ ರಚನೆ ಮಾಡಲಾಗಿದ್ದು,ನೂತನ ಅಧ್ಯಕ್ಷರನ್ನಾಗಿ ವಕೀಲ ಶರಣಪ್ಪ ಅನಸೂರ ಅವರನ್ನು ನೇಮಕಗೊಳಿಸಲಾಗಿದ್ದು.ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಸಂಘಟನೆಯನ್ನು ಬಲಪಡಿಸುವಂತೆ ಕರೆ ನೀಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ನೂತನ ತಾಲೂಕ ಅಧ್ಯಕ್ಷ ಶರಣಪ್ಪ ಅನಸೂರಗೆ ಸನ್ಮಾನಿಸಿ ನೇಮಕಾತಿ ಪತ್ರವನ್ನು ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ,ಅಹಿಂದ ಸಂಘಟನೆ ತಾಲೂಕ ಅಧ್ಯಕ್ಷ ಚನ್ನಪ್ಪ ಎಲಿಗಾರ,ಮುಖಂಡರಾದ ನಾಗರಾಜ ಪೂಜಾರಿ ತಿಮ್ಮಾಪುರ,ಭೀಮರಾಯ ಕಡಿಮನಿ ಲಕ್ಷ್ಮೀಪುರ,ಚಂದ್ರಶೇಖರ ವಾಯ್.ದೊಡ್ಮನಿ,ಬಸವರಾಜ ದೊಡ್ಮನಿ ಹಂಧ್ರಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here