ಸಾಲ ತೆಗೆದುಕೊಂಡು ಸದಸ್ಯರು ಪ್ರಾಮಾಣಿಕವಾಗಿ ಮರುಪಾವತಿ ಮಾಡಿ; ಪಟೇಲ್

0
19

ಶಹಾಬಾದ: ಸಂಘದ ಸದಸ್ಯರು ತಮ್ಮ ಅವಶ್ಯಕತೆಗೆ ತಕ್ಕಂತೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ತೆಗೆದುಕೊಂಡು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದರೆ, ಸಂಘವು ಇನ್ನೂ ಎತ್ತರಕ್ಕೆ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ನಗರದ ಸುರಕ್ಷಾ ಸೌಹಾರ್ದ ಸಂಘದ ಅಧ್ಯಕ್ಷ ಡಾ.ಅಹ್ಮದ್ ಪಟೇಲ್ ಹೇಳಿದರು.

ಅವರು ನಗರದ ಶಮ್ಸ್ ಫಂಕ್ಷನ್ ಹಾಲ್‍ನಲ್ಲಿ ಶ್ರೀ ಸೌಹಾರ್ದ ಪತ್ತಿಯ ಸಹಕಾರಿ ಸಂಘದಿಂದ ಆಯೋಜಿಸಲಾದ 11ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಸಂಘದ ಎಲ್ಲಾ ಸದಸ್ಯರಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆಯನ್ನು ಕಾಪಾಡಿಕೊಂಡು ಹೋದಾಗ ಮಾತ್ರ ಸಂಘ ಬೆಳೆಯುತ್ತದೆ.ಅಲ್ಲದೇ ಸದಸ್ಯರು ತೆಗೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಬೇಕು.ಸಂಘದ ಬೆಳವಣಿಗೆ ಜತೆಗೆ ತಮ್ಮ ಅಭಿವೃದ್ಧಿಯೂ ಸಾಧ್ಯವಾಗುತ್ತದೆ.ಆ ನಿಟ್ಟಿನಲ್ಲಿ ಎಲ್ಲರೂ ಸಂಘಕ್ಕಾಗಿ ನಾವು, ನಮಗಾಗಿ ಸಂಘ ಎನ್ನುವ ತತ್ವವನ್ನು ಪಾಲಿಸಬೇಕೆಂದು ಹೇಳಿದರು.

ಓಂ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ರಾಮಣ್ಣ.ಎಸ್.ಇಬ್ರಾಹಿಂಪೂರ ಮಾತನಾಡಿ,ಸಂಘದ ಉದ್ದೇಶವು ಸದಸ್ಯರನ್ನು ಆರ್ಥಿಕವಾಗಿ ಮೇಲೆತ್ತುವುದಾಗಿದೆ. ಎಲ್ಲಾ ಸದಸ್ಯರು ತಮ್ಮತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಸಾಲವನ್ನು ಪಡೆದು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಂಡು ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡಬೇಕೆಂದು ನುಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಡಾ. ವಿಶ್ವನಾಥ.ಟಿ.ಬೆಲ್ಲದ್ ಮಾತನಾಡಿ, ಎಲ್ಲಾ ಸದಸ್ಯರ, ಹಾಗೂ ನಿರ್ದೇಶಕರ ಬೆಂಬಲ, ಸಹಕಾರದಿಂದ ನಾವು 11 ವರ್ಷಗಳನ್ನು ಪೂರೈಸಿದ್ದೇವೆ. ಸಿಬ್ಬಂದಿ ವರ್ಗದವರೂ ಸಹ ಬಹಳ ಆತ್ಮವಿಶ್ವಾಸದಿಂದ ದಿನನಿತ್ಯದ ಸಂಘದ ಕೆಲಸಗಳನ್ನು ಮಾಡುತ್ತಿದ್ದಾರೆ.

ಶಹಾಬಾದಿನಲ್ಲಿ ಇದು ಒಂದು ಮಾದರಿ ಸಹಕಾರಿ ಸಂಘವನ್ನಾಗಿ ಮಾಡಬೇಕಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ಸದಸ್ಯರು ಸಂಘದ ಕಾರ್ಯದ ಬಗ್ಗೆ, ಸದಸ್ಯರ ಹಕ್ಕು ಜವಾಬ್ದಾರಿಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಅವಶ್ಯವಾಗಿದೆ ಎಂದು ನುಡಿದರು.

ಶ್ರೀ ಸಾಯಿ ಸೌಹಾರ್ದ ಪತ್ತಿನ ಸಂಘದ ಅಧ್ಯಕ್ಷ ಶಿವಾಜಿ ಪವಾರ ಹಾಗೂ ಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಶ್ರೀ ಬಾಬು.ಬಿ. ಪವಾರ ವೇದಿಕೆ ಮೇಲೆ ಉಪಸ್ಥಿತರಿದ್ದರು. ರಾಜೇಶ.ಎಸ್.ಅಲ್ಲಿಪೂರ ನಿರೂಪಿಸಿದರು,ನೀಲಕಂಠ.ಎಂ.ಹುಲಿ ವಂದಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕರಾಘವೇಂದ್ರ ಎಂ.ಜಿ. ರವರು 2023-24 ನೇ ಸಾಲಿನ ಅಢಾವೆ ಪತ್ರಿಕೆಯನ್ನು ಓದಿದರು. ಸಭೆಯಲ್ಲಿ ನಿರ್ದೇಶಕರಾದ ಎಲ್ಲಪ್ಪ ಡಿ. ಬಾಂಬೆ, ದುರ್ಗಪ್ಪ ದೇವಕರ, ಶಂಕರ ಬಿ. ದಂಡಗುಲಕರ್, ನರಸಪ್ಪ ಕೆ. ಮಾನೆ, ಬಸವರಾಜ ಎಸ್. ಅಲ್ಲಿಪೂರ, ರೇಷ್ಮಾ ಆರ್. ಇಬ್ರಾಹಿಂಪೂರ, ಸಿದ್ದಮ್ಮ ಪಿ. ಕೋಟನೂರ, ಲೀಲಾವತಿ ಎಂ. ಸೋನಾರ, ತಿಮ್ಮಯ್ಯ ಬಿ. ಮಾನೆ, ದುರ್ಗಣ್ಣಾ ವಿ. ಕೂಸಾಳೆ, ಶರಣಪ್ಪಾ ಎಸ್. ಸನಾದಿ, ವಿರೇಶ ಎಂ. ಮಾಲಿಪಾಟೀಲ್, ಹಾಗೂ ಕಾನೂನು ಸಲಹೆಗಾರರಾದ ಶ್ರೀ ತಿಮ್ಮಯ್ಯ ಹೆಚ್. ಮಾನೆ ಸೇರಿದಂತೆ ಸಂಘದ ಸದ್ಯಸರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here