ಆರೋಗ್ಯಪೂರ್ಣ ಸಮಾಜ ನಿಮಾ೯ಣಕ್ಕೆ ವೈದ್ಯರ ಕೊಡುಗೆ ಅಪಾರ: ನ್ಯಾಯವಾದಿ ಜಾಕೀರ್ ಉಸ್ತಾದ್

0
76

ಕಲಬುರಗಿ: ಸ್ವಸ್ಥ ಸಮಾಜದ ನಿಮಾ೯ಣಕ್ಕಾಗಿ ವೈದ್ಯರು ಹಗಲು ರಾತ್ರಿ ಶ್ರಮಿಸುತ್ತಿದ್ದು, ಸುಭದ್ರಾ ಮತ್ತು ಆರೋಗ್ಯಪೂರ್ಣ ರಾಷ್ಟ್ರಕ್ಕೆ ಅವರ ಸೇವೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಿರಿಯ ನ್ಯಾಯವಾದಿ ಜಾಕೀರ್ ಹುಸೇನ್ ಉಸ್ತಾದ್ ಹೇಳಿದರು.

ಶಾಂತಿ ನಗರದ ಉಸ್ತಾದ್ ಕಿಡ್ನಿ ಮತ್ತು ಮಲ್ಟಿಸ್ಪಷಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

78ನೇ ಸ್ವಾತಂತ್ರೊತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಆಸ್ಪತ್ರೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ತನ್ವೀರ್ ಹುಸ್ಸೇನ ಉಸ್ತಾದ್ ನೆರವೇರಿಸಿ ಮಾತನಾಡಿದ ಅವರು, ಈ ಆಸ್ಪತ್ರೆಯಲ್ಲಿ ಎಲ್ಲಾ ವಿಧದ ಆರೋಗ್ಯ ವಿಮೆ ಮತ್ತು ಆರೋಗ್ಯ ಯೋಜನೆಗಳಡಿ ಸೇವೆ ನೀಡಲಾಗುತ್ತದೆ ಎಂದರು.
ಅತ್ಯಾಧುನಿಕ ತಂತ್ರಜ್ಞಾನದ ವೈದ್ಯಕೀಯ ಯಂತ್ರೋಪಕರಣಗಳನ್ನು ಹೊಂದಿರು ಈ ಆಸ್ಪತ್ರೆ ದಿನದ 24 ಗಂಟೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ನುರಿತ ತಜ್ಞ ವೈದ್ಯರ ತಂಡ ಹಾಗೂ ಆರೋಗ್ಯ ಸಿಬ್ಬಂದಿಗಳನ್ನು ಹೊಂದಿದೆ ಎಂದು ಅವರು ಹೇಳಿದರು.

ಕಾಯ೯ಕ್ರಮದಲ್ಲಿ ಡಾ. ಸೈಯದ್ ಮೊಹಸೀನ್, ಡಾ. ತಫಜೀಲ್, ಅಡ್ಮಿನ್ ಸೈಯದ್ ಇಫಾ೯ನ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವಗ೯ದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here