ಕಲಬುರಗಿ: ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ವರುಣನ ಅಬ್ಬರ ಮುಂದುವರೆದಿದ್ದು, ಮಳೆಯಿಂದ ಬೀದರ್-ಕಲ್ಬುರ್ಗಿ ನಡುವಿನ ರೈಲ್ವೆ ಸುರಂಗಮಾರ್ಗದ ಗೋಡೆ ಕುಸಿದಿದೆ. ಅದೃಷ್ಟವಶಾತ್ ಆ ವೇಳೆ ಯಾವುದೇ ಟ್ರೇನ್ ಬಾರದ ಹಿನ್ನೆಲೆ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಕಮಲಾಪುರ ಬಳಿ ಸುರಂಗದ ಮೇಲ್ಭಾಗದ ಗೋಡೆ ಕುಸಿದಿದ್ದು, ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನು ರೈಲು ಹಳಿ ಮೇಲೆ ಬಿದ್ದಿರುವ ಭಾರೀ ಪ್ರಮಾಣದ ಮಣ್ಣು ಮತ್ತು ಕಲ್ಲನ್ನ ಜೆಸಿಬಿಯಿಂದ ತೆರವುಗೊಳಿಸಲಾಗುತ್ತಿದೆ. ಈ ರೈಲ್ವೆ ಮಾರ್ಗದಲ್ಲಿ ಕಲ್ಬುರ್ಗಿ- ಬೀದರ್ ಮಧ್ಯೆ ಏಕೈಕ ಡೆಮೋ ರೈಲು ಸಂಚರಿಸುತ್ತಿದ್ದು ಈಗ ಅದೂ ಸ್ಥಗಿತಗೊಂಡಿದೆ.