ಶರಣ ಡೋಹರ ಕಕ್ಕಯ್ಯ ದೇವಸ್ಥಾನದ ಜೀರ್ಣೋದ್ದಾರದ ಉದ್ಘಾಟನೆ, ಪಲ್ಲಕ್ಕಿ ಉತ್ಸವ

0
65

ಕಲಬುರಗಿ: ನಗರದ ಜಗತ್ ಬಡಾವಣೆಯಲ್ಲಿರುವ ಶರಣ ಡೋಹರ ಕಕ್ಕಯ್ಯ ದೇವಸ್ಥಾನದ ಆವರಣದಲ್ಲಿ ಶರಣ ಡೋಹರ ಕಕ್ಕಯ್ಯ ದೇವಸ್ಥಾನದ ಜೀರ್ಣೋದ್ದಾರದ ಉದ್ಘಾಟನೆ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವನ್ನು ಶಾಸಕ ಬಸವರಾಜ ಮತ್ತಿಮುಡು ಅವರು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಸಮಾಜದ ಗುರುಮಾತೆ ನಂದಾತಾಯಿ ಇವರಿಂದ ಜಗಜ್ಯೋತಿ ಬಸವೇಶ್ವರರು, ಸಂವಿಧಾನಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್, ಹಸಿರುಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಅವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಟ್ರಸ್ಟಿನ ಅಧ್ಯಕ್ಷರಾದ ಸಾಯಿಬಣ್ಣ ಹೋಲ್ಕರ್, ಪ್ರಕಾರ್ಯದರ್ಶಿ ಮೋತಿಲಾಲ ಕಟಕೆ, ಹೈ.ಕ. ಡೋರ ಕಕ್ಕಯ್ಯ ಸಮಾಜದ ಅಧ್ಯಕ್ಷ ಲಿಂಗೋಜಿ ಗಾಜರೆ, ಲಿಂಗಾಯತ್ ಸಮಾಜದ ನಾಯಕರಾದ ಪ್ರಭುಲಿಂಗ ಮಹಾಗಾಂವಕರ್, ಆರ್.ಜಿ. ಶೆಟಗಾರ, ಸಮಾಜದ ಗೌರವಾಧ್ಯಕ್ಷ ರಾಹುಲ ವಿಠಲ ಹೋಟಕರ್, ಮುಖಂಡರಾದ ವಿಠಲ ಎಸ್.ಗೋಳಾ, ಸುಧೀರಕುಮಾರ್ ಹೋಟ್ಕರ್, ಡಾ. ತುಳಜಾರಾಮ ಟಿ. ಗಾಯದನಕರ್, ರಾಮಚಂದ್ರ ಬಾಬುರಾವ ಕಟಕೆ, ಸತೀಶ ಶಂಕರ ಇಂಗಳೆ, ಅನೀಲಕುಮಾರ ಸಾವಳಕರ್, ತ್ಯಾಗರಾಜ ಕದಂ, ರಾಜಕುಮಾರ ಅಶೋಕ ಗಾಜರೆ, ಸುಭಾಷ ಗಾಜರೆ, ಅಮೃತ ಮಹಾವರಕರ, ಮಹಾದೆವರಾವ ಸಿ. ಪೆÇೀಳ, ಕಾಶಿರಾವ ನಂದಿಕೂರ, ರಮೇಶ ಗಾಯದನಕರ್, ಸಚಿನ್ ಹೋಟಕರ್, ದೇವಿಂದ್ರ ಧಡಕೆ, ಅರ್ಜುನ ಸೋನಕೊಡೆ, ಕಮಲಾಬಾಯಿ ಹೋಳಕರ್, ಶೇಶಾಬಾಯಿ ಗಾಯದನಕರ್, ಸುಮಿತ್ರಾ ಹೋಟ್ಕರ್, ಅಶ್ವಿನಿ ಪ್ರತಾಪ್ ಶ್ರೇಯಕರ, ಮಂಜುನಾಥ ಹುಟಗಿ, ಕರೆಪ್ಪ ಲಕ್ಷಣ ಹೋಟ್ಕರ್, ಗಣಪತಿ ಜೋಗದನಕರ್, ಸಂಜೀವಕುಮಾರ ದರ್ವಶ, ತುಳಜಾರಾಮ ಗಾಯದನಕರ್ ಸೇರಿದಂತೆ ಸಮಾಜದ ಸರ್ವ ಬಾಂಧವರು, ಭಕ್ತಾಧಿಗಳು ಉಪಸ್ಥಿತರಿದ್ದರು.

ಡಾ. ತುಳಜಾರಾಮ ಗಾಯದನಕರ್ ಸ್ವಾಗತಿಸಿದರು.ಮೋತಿಲಾಲ ಎಂ. ಕಟಕೆ ನಿರೂಪಿಸಿ ವಂದಿಸಿದರು. ಪಲ್ಲಕ್ಕಿ ಉತ್ಸವ ಕಾರ್ಯಕ್ರಮವು ಭವ್ಯ ಮೆರವಣಿಗೆಯೊಂದಿಗೆ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here