ಅಕ್ಕಮಹಾದೇವಿಯು ಇಂದಿನ ಮಹಿಳೆಯರಿಗೆ ಆದರ್ಶಪ್ರಾಯ

0
123

ಶಹಾಬಾದ: ಧೈರ್ಯ ಮತ್ತು ಆತ್ಮವಿಶ್ವಾಸಕ್ಕೆ ಅಕ್ಕಮಹಾದೇವಿಯು ಇಂದಿನ ಮಹಿಳೆಯರಿಗೆ ಆದರ್ಶಪ್ರಾಯ ಎಂದು ಶಿರಗುಪ್ಪಾದ ಬಸವ ಚಿಂತಕರಾದ ಮಹಾಂತೇಶ ಕುಂಬಾರ ಹೇಳಿದರು.

ಅವರು ಬುಧವಾರ ನಗರದ ಹಳೆಶಹಾಬಾದನ ಶ್ರೀ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಲಾದ ವೀರ ವಿರಾಗಿಣಿ ಅಕ್ಕಮಹಾದೇವಿಯವರ ಪ್ರವಚನ ಕಾರ್ಯಕ್ರಮದ ಪ್ರವಚನಕಾರರಾಗಿ ಮಾತನಾಡಿದರು.

Contact Your\'s Advertisement; 9902492681

ಅಕ್ಕನ ಜೀವನ ಘಟ್ಟಗಳು ಹೇಳುವದಾದರೆ ಅದೊಂದು ಕಠಿಣ ಸಾಧನೆಯ ದಾರಿ.ಉಡುತಡಿಯಲ್ಲಿ ಜನಿಸಿದ ಅಕ್ಕ ಮಹಾದೇವಿ ಬಾಲ್ಯದಿಂದಲೂ ಶಿವಭಕ್ತೆಯಾಗಿದ್ದಳು.ಲಿಂಗವನ್ನೇ ಪತಿಯಾಗಿ ಭಾವಿಸಿ ಮಾನಸಿಕವಾಗಿ ತನ್ನ ಆರಾಧ್ಯದೈವ ಚೆನ್ನಮಲ್ಲಿಕಾರ್ಜುನನ್ನೇ ಮದುವೆಯಾಗಿರುತ್ತಾಳೆ.ಆದರೆ ಆಕೆಯ ರೂಪಕ್ಕೆ ಮಾರು ಹೋದ ಕೌಶಿಕ ರಾಜ ಆಕೆಯನ್ನೇ ಮದುವೆಯಾಗಲು ಬಯಸುತ್ತಾನೆ.

ಕುಟುಂಬಸ್ಥರು ಅಕ್ಕಮಹಾದೇವಿಯನ್ನು ಕೊಡಲು ನಿರಾಕರಿಸುತ್ತಾರೆ. ಆದರೆ ಮದುವೆಯನ್ನು ನಿರಾಕರಿಸಿದರೆ ತನ್ನ ಕುಟುಂಬಕ್ಕೆ ಒದಗಬಹುದಾದ ಆಪತ್ತನ್ನು ಕಂಡು ಮಹಾದೇವಿ ಶಿವಧ್ಯಾನಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು ಎಂಬ ಷರತ್ತಿನೊಂದಿಗೆ ಅರಮನೆಗೆ ಹೋಗುತ್ತಾಳೆ.ಕೌಶಿಕ ರಾಜ ಆ ಷರತ್ತನ್ನು ಮುರಿದು, ಬಲವಂತಕ್ಕೆ ಇಳಿಸಿದಾಗ ಮಹಾದೇವಿ ತೋರಿದ ಪ್ರತಿಭಟನೆಯ ರೀತಿ ಇಂದಿಗೂ ಲೋಕವನ್ನು ಬೆಚ್ಚಿ ಬೀಳಿಸುತ್ತದೆ.ಇಂದಿಗೂ ಯಾವ ಹೆಣ್ಣು ಈ ರೀತಿಯ ಕಷ್ಟಕ್ಕೆ ಒಳಗಾಗಬಾರದು.

ಅಕ್ಕ ಕಷ್ಟದಲ್ಲಿಯೇ ತನ್ನ ಮನೋಬಲವನ್ನು ಹೆಚ್ಚಿಸಿಕೊಂಡು ಹೋರಾಡಿದ ಪರಿ ಮಾತ್ರ ಅದ್ಭುತ. ತಕ್ಷಣವೇ ಬಟ್ಟೆಯನ್ನು ಬಿಸಾಕಿ ದಿಗಂಬರೆಯಾಗಿ,ನಂತರ ಕೇಶಾಂಬರೆಯಾಗಿ ಅಲ್ಲಿಂದ ಹೊರಬರುತ್ತಲೇ ಜೀವನದಲ್ಲಿ ಅನುಭವಿಸಿದ ಕಷ್ಟವನ್ನು ವಚನಗಳ ಮೂಲಕ ಸಾರುತ್ತಾಳೆ.ಮುಂದೆ ಅನುಭವ ಮಂಟಪಕ್ಕೆ ಕಡೆಗೆ ಸಾಗುತ್ತಾಳೆ.ಆದರೆ ಅಕ್ಕಮಹಾದೇವಿ ಇಡೀ ಸ್ತ್ರಿ ಕುಲಕ್ಕೆ ಮಾದರಿ.ಅವಳ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಸಾನಿಧ್ಯ ವಹಿಸಿ ಮಾತನಾಡಿದ ಮುಗುಳನಾಗಾವಿಯ ಸಿದ್ದಲಿಂಗ ಶಿವಾಚಾರ್ಯರು, 12ನೇ ಶತಮಾನದ ಅಕ್ಕಮಹಾದೇವಿ ಪ್ರವಚನವೆಂದರೆ ಇತಿಹಾಸ.ಇತಿ ಎಂದರೆ ಹೀಗಿತ್ತು ಎಂದು ತಿಳಿಸುತ್ತದೆ.ಆದರೆ ಪುರಾಣ ಎಂದರೆ ಅದರಲ್ಲಿ ಹೀಗಿತ್ತು ಎಂದು ಹೇಳುವುದು ಕಷ್ಟ. ಶರಣರ ಆದರ್ಶದಂತೆ ಸರಳಾಗಿ ಬದುಕುವ, ಸತ್ಯವನ್ನು ಹೇಳುವ, ಪರೋಪಕಾರ ಬುದ್ಧಿಯನ್ನು ಮೈಗೂಡಿಸಿಕೊಳ್ಳುವ, ಪ್ರಾಮಾಣಿಕತೆಯನ್ನು ಮೆರೆಯುವಂತಹ ಜೀವನ ಮೌಲ್ಯಗಳನ್ನು ರೂಢಿಸಿಕೊಂಡರೆ ಸಾಮಾನ್ಯರೂ ಅಸಾಮಾನ್ಯರಾಗಬಹುದು. ಇದು ಕೇವಲ ಒಬ್ಬ ಬಸವಣ್ಣ, ಅಕ್ಕಮಹಾದೇವಿ, ಮಾತ್ರ ಸೀಮಿತವಲ್ಲ.ಮನಸ್ಸು ಮಾಡಿದರೆ ಪ್ರತಿಯೊಬ್ಬರೂ ಒಬ್ಬೊಬ್ಬ ಆದರ್ಶ ಪುರುಷರಾಗಬಹುದು ಎಂದು ಹೇಳಿದರು.

ಮುಖಂಡರಾದ ಗೋರಖನಾಥ ಶಾಖಾಪೂರ, ಉದ್ಯಮಿ ಬೀಮರಾವ ಸುಗೂರ, ಮುಖಂಡರಾದ ಗುರುರಾಜ ಮಾಲಿಪಾಟೀಲ, ವ್ಯಾಪಾರಸ್ಥರಾದ ನರೇಂದ್ರ ವರ್ಮಾಅ.ಭಾ.ವೀ.ಮ ಹಳೆಶಹಾಬಾದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ,ನಗರಸಭೆ ಸದಸ್ಯ ಮಲ್ಲಿಕಾರ್ಜುನ ವಾಲಿ ವೇದಿಕೆಯ ಮೇಲಿದ್ದರು, ಶ್ರೀ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಬಸವರಾಜ ತರನಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here