ರಾಷ್ಟ್ರೀಯ ಬಸವ ಸೇನಾ ಸಂಘಟನೆಯ ಸದಸ್ಯತ್ವಕ್ಕೆ ಅಧಿಕೃತ ಚಾಲನೆ

0
75

ಕಲಬುರಗಿ: ರಾಷ್ಟ್ರೀಯ ಬಸವ ಸೇನಾ ಸಂಘಟನೆಯ ಸದಸ್ಯತ್ವಕ್ಕೆ ನಗರದ ಬಸವೇಶ್ವರ ಪುತ್ಥಳ್ಳಿ ಆವರಣದಲ್ಲಿ ಮಂಗಳವಾರದಂದು ಖ್ಯಾತ ಉದ್ದಿಮೆದಾರ-ಬಸವ ಸೇವಕ ರಾಜಶೇಖರ ಯಂಕಂಚಿ ಅಧಿಕೃತವಾಗಿ ಚಾಲನೆ ನೀಡಿದರು.

ನಂತರ ಮಾತನಾಡಿದ ರಾಜಶೇಖರ ಯಂಕಂಚಿ, ಇಂದಿನ ಯುವ ಜನತೆಯಲ್ಲಿ ಬಸವ ಪ್ರಜ್ಞೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದ ಅವರು, ನವ ಯುವ ಯುಗ ನಿರ್ಮಿಸಬೇಕಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

Contact Your\'s Advertisement; 9902492681

ಪ್ರಮುಖರಾದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಸತೀಶ ಸಜ್ಜನ್ ಹಾಗರಗುಂಡಗಿ, ವೀರೇಶ ಕಲಕೋರಿ, ನಾಗರಾಜ ಕಾಮಾ, ಎಸ್.ಎನ್.ಪಾಟೀಲ ಭೂಸನೂರ, ಮಹಾದೇವಪ್ಪ ಗೊಬ್ಬೂರ, ಮಹಾದೇವ ಬಡಾ, ಶಿವಾನಂದ ಡೋಮನಾಳ, ಚಂದ್ರಶೇಖರ ಮಲ್ಲಾಬಾದಿ, ಅಶೋಕ ಘೂಳಿ, ಅಮೀತ ಘೂಳಿ, ಪ್ರಸನ್ನ ವಾಂಜರಖೇಡೆ, ರವಿ ಹರಗಿ, ಭೀಮಣ್ಣಗೌಡ ಪರಗೊಂಡ, ಬಿ.ಎಂ.ಪಾಟೀಲ ಕಲ್ಲೂರ, ಪರಮೇಶ್ವರ ಶಟಕಾರ, ಯೋಗೇಶ ಹಿರೇಮಠ ಸೇರಿ ಅನೇಕ ಯುವಕರು ಪಾಲ್ಗೊಂಡಿದ್ದರು.

ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಈ ಸದಸ್ಯತ್ವ ಅಭಿಯಾನ ಶುರು ಮಾಡಲು ಈಗಾಗಲೇ ನಿರ್ಧರಿಸಲಾಗಿದ್ದು, ಸಂಘಟನೆಯ ಬಲ ಮತ್ತಷ್ಟು ಬಲಪಡಿಸುವ ಗುರಿ ಹೊಂದಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here