ಕಲಬುರಗಿ: ನಗರದಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಪ್ರಾದೇಶಿಕ ಕೇಂದ್ರ ಕಲಬುರಗಿಯಲ್ಲಿ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು & ಪ್ರಾದೇಶಿ ಕೇಂದ್ರ ಕಲಬುರಗಿ ವತಿಯಿಂದ ವಿವಿಧ ತಾಲೂಕಿನ ಗ್ರಾಮ ಪಂಚಾಯತಿಯ ಮಟ್ಟದ ಸ್ಥಳೀಯ ಮಹಿಳಾ ಒಕ್ಕೂಟದ ಸದಸ್ಯರಿಗೆ ಘನ-ತಾಜ್ಯ ನಿರ್ವಹಣೆ ಕುರಿತು 3 ದಿನಗಳ ವಸತಿ ಸಹಿತ ಸುಸ್ಥಿರ ನಡೆ ಸ್ವಚ್ಛತೆ ಕಡೆಗೆ 10 & 11ನೇ ತಂಡದವರಿಗೆ ಪುನಶ್ಚೇತನ ತರಬೇತಿಯನ್ನು ಆಯೋಜಿಸಲಾಗಿತ್ತು ಮೊದಲಿಗೆ ತರಬೇತಿ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಕೇಂದ್ರದ ಉಪ ನಿರ್ದೇಶಕರಾದ ಧನರಾಜ್ ಬೊರಾಳೆ ಮಾತನಾಡುತ್ತ ಸ್ವಚ್ಛ ಗ್ರಹಿಗಳು ಮನೆ-ಮನೆಗೆ ಹೋಗಿ ಕಸ ಸಂಗ್ರಹಣೆ ಮಾಡಿ ಸ್ವಚ್ಛವಾಹಿನಿ ಮೂಲಕ ಸ್ವಚ್ಛ ಸಂರ್ಕಿಣಕ್ಕೆ ತಂದು ಕಸವನ್ನು ಹಸಿ ಕಸ & ಒಣ ಕಸವನ್ನಾಗಿ ವಿಲೇವಾರಿ ಮಾಡಬೇಕೆಂದರು.
ತರಬೇತಿ ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕಾರದ ಶಿವಪುತ್ರಪ್ಪ ಗೊಬ್ಬರು, ಡಾ.ರಾಜು ಕಂಬಳಿಮಠ, ರವರು ತರಬೇತಿಯ ಗುರಿ-ಉದ್ದೇಶ ಕುರಿತು ಮಾತಾನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸತೀಶಕುಮಾರ ಸುಲೇಪೇಟ, ಪುಷ್ಪಾ ಬೆಳಮಗಿ, ಪರಮಾನಂದ ಹಾಗೂ ಸಬೀನಾ ಬಾನು ರವರು ಆಗಮಿಸಿದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ವಿಷಯ ಮಂಡನೆ ಮಾಡಿದರು.