ಅನರ್ಹರಿಗೆ ಆಶ್ರಯ ಮನೆ ಹಂಚಿಕೆ ರದ್ದು ಪಡೆಸಲು ಸಚಿವ ಜಮೀರ್ ಅಹ್ಮದ್ ಗೆ ಮನವಿ

0
11

ಕಲಬುರಗಿ: ನಗರದ ಸರ್ವೆ ನಂ.75 ಮತ್ತು 76ರ ಎಸ್.ಎಂ.ಕೃಷ್ಣಾ ಆಶ್ರಯ ಕಾಲೋನಿಯ 200 ಮನೆಯ ನಿವಾಸಿಗಳಿಗೆ ಅವರ ಹೆಸರಿಗೆ ಮಂಜೂರಾಗಿರುವ ಹಕ್ಕುಪತ್ರ ವಿತರಿಸದೆ ಶ್ರೀಮಂತರಿಗೆ ವಿತರಣೆ ಮಾಡಿರುವುದನ್ನು ರದ್ದು ಪಡಿಸಿ ನಿಜವಾದ ಫಲಾನುಭವಿಗಳಿಗೆ ನೀಡುವಂತೆ ಜೈ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಚೀನ್ ಎಸ್.ಫರತಾಬಾದ, ಸುರೇಶ ಹನಗುಡಿ, ಅಂಬು ಮಸ್ಕಿ, ಅಕ್ಷಯ, ನವೀನ್, ಸಾಯಿಕುಮಾರ ಸಿಂಧೆ, ಪ್ರವೀಣ್ ಸಿಂಧೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here