ನಾಡು ನುಡಿ ಸೇವೆಗಾಗಿ ಕಂಕಣಬದ್ಧರಾಗಿ ನಿಲ್ಲೋಣ:ಆನೆಗುಂದಿ

0
49

ಶಹಾಪುರ: ಕನ್ನಡ – ನಾಡು – ನುಡಿ – ನೆಲ- ಜಲ ಸೇವೆಗಾಗಿ ಪಕ್ಷಾತೀತವಾಗಿ ಯಾವುದೇ ಜಾತಿ ಧರ್ಮ ಭೇದ ಭಾವವಿಲ್ಲದೆ ಕಂಕಣಬದ್ಧರಾಗಿ ನಿಲ್ಲೋಣ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ ಹೇಳಿದರು.

ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಏರ್ಪಡಿಸಿರುವ ೬೪ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ನಾವು ಕನ್ನಡ ಸ್ವಾಭಿಮಾನಿಗಳು ಆದ್ದರಿಂದ ಕನ್ನಡದ ಪ್ರೀತಿ ಪ್ರೇಮ ಉಳಿಸಿ ಬೆಳೆಸುವುದು ಇಂದಿನ ಯುವಕರ ಕೈಯಲ್ಲಿದೆ ಎಂದು ಸಾಹಿತಿ ಗುರುಬಸಯ್ಯ ಗದ್ದುಗೆ ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಾಹಿತಿಗಳಾದ ಸಿದ್ದರಾಮ ಹೊನ್ಕಲ್, ಡಾ: ಮೊನಪ್ಪ ಶಿರವಾಳ,ಡಾ: ಅಬ್ದುಲ್ ಕರೀಂ ಕನ್ಯಾಕೊಳ್ಳೂರ, ಸಣ್ ನಿಂಗಣ್ಣ ನಾಯ್ಕೋಡಿ,ದೇವಿಂದ್ರಪ್ಪ ಕನ್ಯಾಕೋಳೂರ,ಅಯ್ಯಪ್ಪ ವಠಾರ,ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಸವರಾಜ ಸಿನ್ನೂರ್ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here