ವೈಜನಾಥ ಪಾಟೀಲ ನಿಧನಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಂಬಾರ, ಸಾಹಿತಿ ಸಿದ್ದಲಿಂಗಯ್ಯ ಅವರಿಂದ ಕಂಬನಿ

0
93

ಕಲಬುರಗಿ: ಮಾಜಿ ಸಚಿವ ವೈಜನಾಥ ಪಾಟೀಲ ನಿಧನಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಸಾಹಿತಿ ಸಿದ್ಧಲಿಂಗಯ್ಯ ಕಂಬನಿ ಮಿಡಿದಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ಧ ಅವರ ಪಾರ್ಥೀವ ಶರೀರವನ್ನು ಕಲಬುರಗಿಯ ಶಾಂತಿ ನಗರದ ಅವರ ಮನೆಯಲ್ಲಿ ಕೆಲಹೊತ್ತು ಇಡಲಾಗಿತ್ತು. ನಂತರ ಅವರ ಹೋರಾಟ ಆರಂಭಿಸಿದ ಹಿಂದಿ ಪ್ರಚಾರ ಸಭಾ ಆವಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ವಿವಿಧ ಪಕ್ಷದ ಮುಖಂಡರು, ಜನಪ್ರತಿನಿಧಿಗಳು, ಯುವಕರು ಆಗಮಿಸಿ ದರ್ಶನ ಪಡೆದರು.
ಇದೇವೇಳೆಯಲ್ಲಿ ನಾಳೆ‌ ನಡೆಯುವ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಂಬಾರ ಮತ್ತು ಸಿದ್ದಲಿಂಗಯ್ಯ ಆಗಮಿಸಿ ಕಂಬನಿ ಮಿಡಿದರು.

Contact Your\'s Advertisement; 9902492681

“ವೈಜನಾಥ ಪಾಟೀಲ ಅವರು ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಅವರ ಹೋರಾಟದ ಫಲವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಆರ್ಟಿಕಲ್ ೩೭೧ (ಜೆ) ಜಾರಿಗೆ ಬಂದಿತ್ತು.ನಿಷ್ಠುರ ಇದೇವೇಳೆಯಲ್ಲಿ ಅವರೊಬ್ಬ ರಾಜಕಾರಣಿಯಾಗಿದ್ದರು’ ಎಂದು ಅಶೃತರ್ಪಣ ಸಲ್ಲಿಸಿದರು.

ಶಾಸಕರಾದ ಎಂ.ವೈ. ಪಾಟೀಲ, ಸುಭಾಷ್ ಗುತ್ತೇದಾರ, ಬಿ.ಜಿ. ಪಾಟೀಲ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮುಖಂಡರಾದ ಸುಭಾಷ ರಾಠೋಡ, ಬಸವರಾಜ ಇಂಗಿನ್, ವಿಠ್ಠಲ ದೊಡ್ಡಮನಿ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಶಿವರಂಜನ್ ಸತ್ಯಂಪೇಟೆ, ಪ್ರಭುಲಿಂಗ ಮಹಾಗಾಂವಕರ, ಆರ್.ಜಿ. ಶೆಟಗಾರ, ಸುರೇಶ ಸಜ್ಜನ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here