ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಬಡಿಗೇರ ನೇಮಕ: ಸ್ನೇಹ ಸನ್ಮಾನ ಸಮಾರಂಭ 5 ರಂದು

0
181

ಕಲಬುರಗಿ: ಕರ್ನಾಟಕ ಸರ್ಕಾರದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ ಡಿ.ಬಡಿಗೇರ್ ಅವರಿಗೆ ಇಲ್ಲಿನ ಸಹೃದಯಿ ಸ್ನೇಹ ಬಳಗದ ವತಿಯಿಂದ ಸ್ನೇಹ ಸನ್ಮಾನ ಸಮಾರಂಭವನ್ನು ನ.೫ ರಂದು ಸಾಯಂಕಾಲ ೪.೩೦ ಕ್ಕೆ ನಗರದ ಸಂಗಮೇಶ್ವರ ಕಾಲೋನಿಯಲ್ಲಿರುವ ಸಂಗಮೇಸ್ವರ ಮಹಿಳಾ ಮಂಡಳದಲ್ಲಿ ಏರ್ಪಡಿಸಲಾಗಿದೆ ಎಂದು ಬಳಗದ ಪ್ರಮುಖರಾದ ವಿಜಯಕುಮಾರ ತೇಗಲತಿಪ್ಪಿ ಹಾಗೂ ಹಣಮಂತರಾಯ ಅಟ್ಟೂರ ತಿಳಿಸಿದ್ದಾರೆ.

Contact Your\'s Advertisement; 9902492681

ಕಳೆದೆರಡು ದಶಕಗಳಿಂದ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಯುವ ಪ್ರಶಸ್ತಿ ಪುರಸ್ಕೃತ ಸುರೇಶ ಬಡಿಗೇರ ಅವರು, ಸಾಹಿತ್ಯ, ಸಂಘಟನೆ, ಪತ್ರಿಕೋದ್ಯಮ, ಹೋರಾಟ ಹೀಗೆ ಅನೇಕ ಕ್ಷೇತ್ರಗಳಲ್ಲಿ ಶ್ರಮಿಸಿದ ಬಹುಮುಖಿ ಪ್ರತಿಭೆಯಾಗಿದ್ದಾರೆ. ಮೂರ್ತಿ ಚಿಕ್ಕದಿದ್ದರೂ ಕೀರ್ತಿ ದೊಡ್ಡದು ಎನ್ನುವ ಹಾಗೇ ಸುರೇಶ ಬಡಿಗೇರ ಅವರು ವಯಸ್ಸಿನಲ್ಲಿ ಸಣ್ಣವರಾದರೂ ಅವರು ಸಮಾಜಕ್ಕಾಗಿ ನೀಡಿದ ಕೊಡುಗೆ ಅಮೋಘವಾದುದು ಎಂದು ಅವರು ವಿವರಿಸಿದ್ದಾರೆ.

ಸಾರಂಗಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಜರುಗಲಿರುವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ತಾಪಂ ಮಾಜಿ ಅಧ್ಯಕ್ಷ ಚೆನ್ನಮ್ಮ ಎಸ್.ಸಾಹು ಆಗಮಿಸಲಿದ್ದಾರೆ. ಸಂಗಮೇಶ್ವರ ಮಹಿಳಾ ಮಂಡಳದ ಅಧ್ಯಕ್ಷೆ ವೈಶಾಲಿ ದೇಶಮುಖ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದ ಯಶಸ್ವಿಗಾಗಿ ರೂಪಿಸಿಕೊಂಡಿರುವ ಸಹೃದಯಿ ಸ್ನೇಹ ಬಳಗದಲ್ಲಿ ಪತ್ರಕರ್ತ ಶಿವರಂಜನ್ ಸತ್ಯಂಪೇಟೆ, ರಾಜಕುಮಾರ ಬಿ.ಉದನೂರ, ನಾಗಲಿಂಗಯ್ಯ ಮಠಪತಿ, ಗುಂಡಣ್ಣ ಡಿಗ್ಗಿ, ಶಂಕರ ಬಿರಾದಾರ, ಎನ್.ಎಸ್.ಹಿರೇಮಠ, ರಮೇಶ ಹಣಕುಣಿ, ರವಿಕುಮಾರ ಶಹಾಪುರಕರ್, ರಾಘವೇಂದ್ರ ಮರತೂರಕರ್, ಸವಿತಾ ನಾಶಿ ಸೇರಿ ಅನೇಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here