ದುಡಿಯುವ ವರ್ಗಕ್ಕೆ ಸೂಕ್ತ ಪ್ರಾತಿನಿಧ್ಯತೆ ದೊರೆಯಲಿ: ಪ್ರೊ.ಎಚ್.ಬಿ.ಪಾಟೀಲ

0
39

ಕಲಬುರಗಿ: ವಿವಿಧ ಕಾಯಕಗಳಲ್ಲಿ ಯಾವುದೇ ರೀತಿಯ ಹೆಸರನ್ನು ಬಯಸದೇ ತಮ್ಮನ್ನು ತಾವು ತೊಡಗಿಸಿಕೊಂಡು, ನಿರಂತರವಾಗಿ ಕಾರ್ಯ ಮಾಡುವ ದುಡಿಯುವ ವರ್ಗವಾದ ಕಾಯಕ ಜೀವಿಗಳಾಗಿದ್ದಾರೆ. ಅವರು ಮಾಡುವ ಕಾರ್ಯ ಕೀಳೆಂದು ಭಾವಿಸಿ, ಅವರನ್ನು ಕನಿಷ್ಟವೆಂದು ತಿಳಿಯದೇ, ಸೂಕ್ತ ಪ್ರಾತಿನಿಧ್ಯತೆ ದೊರೆಯಬೇಕೆಂದು ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಹೇಳಿದರು.

ಅವರು ನಗರದ ಆಳಂದ ರಸ್ತೆಯ ದೇವಿ ನಗರದಲ್ಲಿರುವ ’ಮಲ್ಲಿನಾಥ ಮಹಾರಾಜ ಶಾಲೆ’ಯಲ್ಲಿ, ಇಲ್ಲಿನ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ’ಪೌರ ಕಾರ್ಮಿಕರ ದಿನಾಚರಣೆ’ಯ ಪ್ರಯುಕ್ತ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಸತ್ಕಾರ ಗೌರವ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ದುಡಿಯುವ ವರ್ಗ ಕನಿಷ್ಠ, ದುಡಿಸಿಕೊಳ್ಳುವ ವರ್ಗ ಶ್ರೇಷ್ಠ ಎಂಬ ಸಾಮಾಜಿಕ ವ್ಯವಸ್ಥೆ ಹೋಗಬೇಕು. ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಎಲ್ಲಾ ಕಾಯಕ ಶರಣರಿಗೆ ಸಮಾನವಾದ ಸ್ಥಾನಮಾನ ನೀಡಿದ್ದರು. ’ಕಾಯಕವೇ ಕೈಲಾಸ’ ಎಂಬ ತತ್ವ ಸಾರಿ, ಎಲ್ಲಾ ಕಾಯಕ ಜೀವಿಗಳು ಒಂದೇ ಎಂದು ಜಗತ್ತಿಗೆ ಸಾರಿದ್ದಾರೆ. ಚರಂಡಿ ಸ್ವಚ್ಛಗೊಳಿಸುವಂತಹ ಕಾರ್ಯ ಕನಿಷ್ಠವೆಂದು ಭಾವಿಸಿ, ಯಾರೂ ಆ ಕಾರ್ಯ ಮಾಡದೇ ಹೋದರೆ, ಇಡೀ ಪರಿಸರ ಹಾಳಾಗುತ್ತದೆ. ಹೀಗಾಗಿ ಯಾವುದೇ ಕಾರ್ಯವು ಮೇಲೂ ಮತ್ತು ಕೀಳೆಂದು ಭಾವಿಸದೆ, ಪೂಜ್ಯನೀಯ ಭಾವನೆಯಿಂದ ಮಾಡಬೇಕು. ಬೆವರು ಹರಿಸಿ ದುಡಿಯುವ ಕಾರ್ಮಿಕ ವರ್ಗವಿಲ್ಲದ ದೇಶದ ಆರ್ಥಿಕತೆ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

Contact Your\'s Advertisement; 9902492681

ಸತ್ಕಾರ ಸ್ವೀಕರಿಸಿ ಮಾತನಾಡಿದ ಸಿದ್ಧಾರ್ಥ ಬಡದಾಳಕರ್, ಪೌರ ಕಾರ್ಮಿಕರು ಅನೇಕ ವರ್ಷಗಳಿಂದ ಕನಿಷ್ಠ ಕೂಲಿಯಲ್ಲಿ ದುಡಿಯುತ್ತಿದ್ದಾರೆ. ಸೇವೆ, ಜೀವನಕ್ಕೆ ಭದ್ರತೆ ನೀಡಬೇಕು. ಸಾಮಾಜಿಕ, ಆರ್ಥಿಕ ಸ್ಥಿತಿ ಉತ್ತಮವಾಗಬೇಕು. ಅಸಂಘಟಿತ ಕಾರ್ಮಿಕ ಆಗ ಮಾತ್ರ ನಾವೂ ನೆಮ್ಮದಿಯುತ ಜೀವನ ಸಾಗಿಸಲು ಸಾಧ್ಯವಾಗುತ್ತದೆಯೆಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಾದ ವಿಠಲ ಸೂರ್ಯವಂಶಿ, ಸರಸ್ವತಿ ಭಂಡಾರಿ, ಪ್ರಮುಖರಾದ ಅಮರ ಬಂಗರಗಿ, ಬಸವರಾಜ ಪುರಾಣೆ, ಪ್ರಭಾಕರ ಎನ್.ವಾಕಡೆ, ತುಕಾರಾಮ ಸಿಂಗೆ, ಚಂಪಾಕಲಾ ನೆಲ್ಲೂರ, ಗಣೇಶ ಗೌಳಿ, ಓಂಕಾರ ಗೌಳಿ, ಗಿರೀಶ ಸೇರಿದಂತೆ ಬಳಗದ ಸದಸ್ಯರು, ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here