ಅಂಗಡಿಗಳ ಮೇಲೆ ಕನ್ನಡ ನಾಮಫಲಕ ಅಳವಡಿಸಲು ಕರವೇ ಆಗ್ರಹ

0
31

ಸುರಪುರ: ನಗರಸಭೆ ವ್ಯಾಪ್ತಿಯಲ್ಲಿನ ವಿವಿಧ ಬೇಡಿಕೆಗಳ ಈಡೇರಿಸಲು ಹಾಗು ಎಲ್ಲಾ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಅಲವಡಿಸಲು ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರಸಭೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಸುರಪುರ ಐತಿಹಾಸಿಕ ನಗರವಾಗಿದ್ದು ನಗರದ ನಾಲ್ಕು ದಿಕ್ಕುಗಳ ರಸ್ತೆಯಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಬೇಕು.ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು.ನಗರದ ಅನೇಕ ವಾರ್ಡುಗಳಲ್ಲಿ ಬೀದಿ ದೀಪಗಳಿಲ್ಲದೆ ಸಂಜೆಯಾದರೆ ಕತ್ತಲು ಆವಸಿಸುತ್ತದೆ ಎಲ್ಲಾ ವಾರ್ಡುಗಳಲ್ಲಿ ಮತ್ತು ಸುರಪುರ ದಿಂದ ಹಸನಾಪುರ ಪೆಟ್ರೋಲ್ ಬಂಕ್ ವರೆಗಿನ ವಿದ್ಯೂತ್ ಕಂಬಗಳಿಗೆ ಬೀದಿ ದೀಪ ಅಳವಡಿಸಬೇಕು.ನಗರದ ಬಸ್ ನಿಲ್ದಾಣ ಮತ್ತು ಅನೇಕ ಸರಕಾರಿ ಕಚೇರಿಗಳ ಆವರಣಗಳಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿವೆ.ಬೀಡಾಡಿ ದನಗಳ ಹಾವಳಿ ನಿಯಂತ್ರಿಸಬೇಕು.ಮುಖ್ಯವಾಗಿ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳ ಮೇಲೆ ಆಂಗ್ಲ ಭಾಷೆಯ ನಾಮಫಲಕಗಳಿದ್ದು ಅವುಗಳನ್ನು ತೆರವುಗೊಳಿಸಿ ಕನ್ನಡದಲ್ಲಿ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಸಿದರು.

Contact Your\'s Advertisement; 9902492681

ನಂತರ ಪೌರಾಯುಕ್ತ ಜೀವನಕುಮಾರ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮುನಾಯಕ ಮಲ್ಲಿಬಾವಿ, ಉಪಾಧ್ಯಕ್ಷ ಶಿವಮೋನಯ್ಯ ನಾಯಕ,ಹಣಮಗೌಡ ಶಖಾಪುರ,ಕೃಷ್ಣಾ ಮಂಗಿಹಾಳ,ಆನಂದ ಮಾಚಗುಂಡಾಳ,ಶ್ರಾವಣಕುಮಾರ ನಾಯಕ,ರಾಮಣಗೌಡ ಬೈಲಾಅಪುರ,ವೆಂಕಟೇಶ ಪರಸನಳ್ಳಿ,ಮಂಜುನಾಥ ಡೊಣ್ಣಿಗೇರಾ,ಅನೀಲ ಬಿರೆದಾರ,ಅಂಬ್ರೇಶ ನಾಯಕ,ಏವು ಚಂದ್ಲಾಪುರ,ಅಯ್ಯಪ್ಪ ವಗ್ಗಾಲಿ,ಭೀಮರಾಯ ಮಾಚಗುಂಡಾಳ,ದೇವು ಮಾಚಗುಂಡಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here