21 ರಂದು ‘ಮಕ್ಕಳ ವಿಕಾಸ ವೈಭವ

0
99

ಕಲಬುರಗಿ: ಮಕ್ಕಳ ಕನಸಿನ ಲೋಕ ತೆರೆದಿಡುವ ಮತ್ತು ಅವರ ವಿವೇಕಕ್ಕೆ ಬೆಳಕು ನೀಡುವ ಉದ್ದೇಶದಿಂದ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಒಂದು ದಿನದ ‘ಮಕ್ಕಳ ವಿಕಾಸ ವೈಭವ-೨೦೧೯’ ಎನ್ನುವ ವಿಶೇಷ ಸಮ್ಮೇಳನವೊಂದನ್ನು ಹಿರಿಯ ನಾಟಕಕಾರ ಈಶ್ವರಪ್ಪ ಫರಹತಾಬಾದ ವೇದಿಕೆಯಡಿಯಲ್ಲಿ ನ.೨೧ ರಂದು ಬೆಳಗ್ಗೆ ೧೦.೧೫ ಕ್ಕೆ ನಗರದ ಶಹಾಬಜಾರದಲ್ಲಿನ ಪರುಷ ಮಠದ ಶ್ರೀ ಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕರೂ ಆದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ.

ಪ್ರತಿಯೊಂದು ಮಗುವಿನಲ್ಲಿ ಪ್ರತಿಭೆಯ ಸಾಗರವೇ ಅಡಗಿರುತ್ತದೆ. ಅದಕ್ಕೆ ಸೂಕ್ತ ಅವಕಾಶ ಮತ್ತು ಪುರಸ್ಕಾರ ದೊರೆತಾಗ ಆ ಪ್ರತಿಭೆ ಸುಂದರವಾಗಿ ಅರಳಲಿಕ್ಕೆ ಸಾಧ್ಯವಾಗುತ್ತದೆ. ಅಂಥ ಸೂಕ್ತ ಪ್ರತಿಭೆಗಳ ಅನಾವರಣಕ್ಕಾಗಿಯೇ ಮೀಸಲಾದ ಕಾರ್ಯಕ್ರಮ ಇದಾಗಿದ್ದು, ಮಕ್ಕಳಿಂದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮುಂತಾದ ಪ್ರತಿಭೆಗಳ ಪ್ರಕಾಶನವಾಗುತ್ತಲಿದೆ. ಆ ಒಲವಿನ ನಲಿವಿನ ಚೆಲುವಿನ ಮಕ್ಕಳ ವಿಕಾಸ ವೈಭವ ಜರುಗಲಿದೆ ಎಂದು ಅವರು ವಿವರಿಸಿದ್ದಾರೆ.

Contact Your\'s Advertisement; 9902492681

ಅಂದು ಬೆಳಗ್ಗೆ ೧೦.೧೫ ಕ್ಕೆ ಹಮ್ಮಿಕೊಂಡ ವೈಭವಕ್ಕೆ ಜಿಪಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ. ಚಾಲನೆ ನೀಡಲಿದ್ದು, ಶ್ರೀ ಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘದ ಉಜಪಾಧ್ಯಕ್ಷ ಸಿದ್ರಾಮಪ್ಪ ಉಕಲಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ರ ಕಲಾವಿದ ಮೋಹನ ಸೀತನೂರ, ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ, ಮಹಿಳಾ ಸಂಘಟಕಿ ಭುವನೇಶ್ವರಿ ಹಳ್ಳಿಖೇಡ, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಸುರೇಶ ಆರ್.ಸಜ್ಜನ್, ಕಾರ್ಯಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಪ್ರತಿಷ್ಠಾನ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಬೆಳಗ್ಗೆ ೧೧.೪೫ ಕ್ಕೆ ನಡೆಯುವ ಇರುವಂತೆ ಎರೆಯುವೆ ಗೋಷ್ಠಿಯಲ್ಲಿ ಕಥೆ ನೈತಿಕತೆ ವಿಷಯದ ಕುರಿತು ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಆರೋಗ್ಯಕ್ಕೆ ಆಪ್ತ ಸಲಹೆ ಕುರಿತು ವೈದ್ಯ ಸಾಹಿತಿ ಡಾ.ಎಸ್.ಎಸ್.ಪಾಟೀಲ ಮಂದರವಾದ ಮಾತನಾಡಲಿದ್ದು, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಬಸವರಾಜ ಕೋನೆಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ-ಸಾಹಿತಿ ಸಂಗಮನಾಥ ರೇವತಗಾಂವ, ಶ್ರೀ ಚನ್ನಮಲ್ಲೇಶ್ವರ ವಿದ್ಯಾವರ್ಧಕ ಸಂಘದ ಪರಮೇಶ್ವರ ಮುನ್ನೋಳ್ಳಿ, ಶ್ರೀಶೈಲ್ ಹೊದಲೂರ, ಶಿಕ್ಷಕ-ಸಾಹಿತಿ ನಾಗೇಂದ್ರಪ್ಪಾ ಮಾಡ್ಯಾಳೆ ಉಪಸ್ಥಿತರಿರುವರು.

ಮಧ್ಯಾಹ್ನ ೨.೧೫ ಕ್ಕೆ ಶ್ರೀ ಚನ್ನಮಲ್ಲೇಶ್ವರ ಪ್ರೌಢ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಶಾಂತಕುಮಾರ ಶಿರೂರ, ಪ್ರಭುಲಿಂಗ ಮೂಲಗೆ ಉಪಸ್ಥಿತರಿರುವರು. ಮಧ್ಯಾಹ್ನ ೩.೧೫ ಕ್ಕೆ ನಡೆಯುವ ಸಮಾರಂಭದಲ್ಲಿ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹರಸೂರ ಸಮಾರೋಪ ನುಡಿಗಳನ್ನಾಡಲಿದ್ದು, ಶ್ರೀ ಚನ್ನ ಮಲ್ಲೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಧೂಳಪ್ಪಾ ಹಾದಿಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ವೀರಶೈವ ಸಮಾಜದ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಆವಂಟಿ, ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ, ಸಂಗೀತ ಕಲಾವಿದೆ ಗಿರೀಜಾ ಕರ್ಪೂರ ಉಪಸ್ಥಿತರಿರುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here