ಆರ್‌ವಿಎನ್ ಜನ್ಮ ದಿನದ ಅಂಗವಾಗಿ ಆಹಾರ ಧಾನ್ಯಗಳ ವಿತರಣೆ

0
196

ಸುರಪುರ: ತಾಲೂಕಿನ ಅಭಿವೃಧ್ಧಿಗೆ ರಾಜಾ ವೆಂಕಟಪ್ಪ ನಾಯಕರ ಕೊಡುಗೆ ದೊಡ್ಡದಿದೆ.ಅವರ ಜನ್ಮ ದಿನವನ್ನು ಇಂದು ಬಡ ಜನತೆಗೆ ಆಹಾರ ಧಾನ್ಯಗಳ ವಿತರಿಸುವ ಮೂಲಕ ಆಚರಣೆ ಮಾಡುತ್ತಿರುವುದು ಖುಷಿ ತಂದಿದೆ ಎಂದು ಮಾಜಿ ನಗರಸಭೆ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿದರು.

ನಗರದ ರಂಗಂಪೇಟೆಯ ವಾರದ ನಿವಾಸದ ಬಳಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರ ೬೩ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬಡ ಜನತೆಗೆ ಆಹಾರ ಧಾನ್ಯಗಳ ವಿತರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ನಗರಸಭೆ ಅಧ್ಯಕ್ಷ ಅಬ್ದುಲ ಗಫೂರ ನಗನೂರಿ ಮಾತನಾಡಿ,ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕರು ಸರಳ ಸಜ್ಜನಿಕೆಯ ರಾಜಕಾರಣಿಗಳಾಗಿದ್ದು ಅವರು ಎಲ್ಲಾ ಧರ್ಮ ಜಾತಿ ಜನಾಂಗದವರನ್ನು ತಮ್ಮ ಬಂಧುಗಳಂತೆ ಕಾಣುವ ಮೂಲಕ ಎಲ್ಲರ ಮನದಲ್ಲಿನ ನಿಜವಾದ ನಾಯಕನ ಸ್ಥಾನದಲ್ಲಿದ್ದಾರೆ ಎಂದರು.

Contact Your\'s Advertisement; 9902492681

ಶರಣು ಅರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ,ನಮ್ಮ ನಾಯಕರಾದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರ ಮಾರ್ಗದರ್ಶನದಂತೆ ಈಬಾರಿ ಸರಳವಾಗಿ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದು ತಾಲ್ಲೂಕಿನಾದ್ಯಂತ ರೋಗಿಗಳಿಗೆ ಹಾಲು ಹಣ್ಣು ವಿತರಿಸುವುದು,ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಗಳ ವಿತರಿಸುವುದು ಹಾಗು ಆಹಾರ ಧಾನ್ಯಗಳ ವಿತರಿಸುವ ಮೂಲಕ ಜನತೆಗೆ ನೆರವಾಗಲಿದ್ದೇವೆ ಎಂದರು.

ನಂತರ ನೂರಾರು ಕುಟುಂಬಗಳಿಗೆ ಅಕ್ಕಿ ಬೇಳೆ ಸೇರಿದಂತೆ ಇತರೆ ಪದಾರ್ಥಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ನಾಸೀರ್ ಕುಂಡಾಲೆ,ಜಹೀರ್ ಅಹ್ಮದ,ಸುವರ್ಣ ಎಸ್. ಎಲಿಗಾರ ಮುಖಂಡರಾದ ಸಿದ್ದು ಅಂಗಡಿ,ಖಾಲಿದ್ ಅಹ್ಮದ್ ತಾಳಿಕೋಟೆ,ದವಲಸಾಬ್ ಚಿಟ್ಟಿವಾಲೆ,ಸಾಹೇಬಗೌಡ ಕುಂಬಾರ,ಮುಖೀರ್ ಕುಂಡಾಲೆ, ಸಿದ್ರಾಮ ಎಲಿಗಾರ, ಬಸವರಾಜ ಬೀರನೂರ,ಶ್ರೀಧರ ಶಖಾಪುರ,ವೆಂಕಟೇಶ ಟೋಣಪೆ,ಅಮರೇಶ ಕುಂಬಾರ,ನಿಂಗಣ್ಣ ವಡಗೇರಿ,ಮಂಜುನಾಥ ಮಠಪತಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here