ಕನ್ನಡ ಸೇನೆ ಕರ್ನಾಟಕ ಸಂಘಟನೆಯ ನಗರ ಘಟಕ ರಚನೆ

0
109

ಸುರಪುರ: ನಾಡಿನಲ್ಲಿ ತನ್ನದೆ ಆದ ರೀತಿಯಲ್ಲಿ ನಾಡು ನುಡಿ ಸೇವೆ ಮಾಡುತ್ತಿರುವ ಕನ್ನಡ ಸೇನೆ ಕರ್ನಾಟಕ ಸಂಘಟನೆಯು ನಿಷ್ಠ ಸೇವೆಯ ಸಂಘಟನೆಯಾಗಿದೆ ಎಂದು ಸಂಘಟನೆಯ ವಿಭಾಗಿಯ ಸಂಘಟನಾ ಕಾರ್ಯದರ್ಶಿ ದೇವು ಬಿಗುಡಿ ಮಾತನಾಡಿದರು.

ನಗರದ ಟೈಲರ್ ಮಂಜಿಲನಲ್ಲಿ ನಡೆದ ನಗರ ಘಟಕ ರಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಇಂದು ರಾಜ್ಯದಲ್ಲಿ ನೂರಾರು ಸಮಸ್ಯೆಗಳು ಕಾಡುತ್ತಿವೆ,ಸರಕಾರಗಳು ಕಂಡು ಕಾಣದಂತಿವೆ,ನಾಡಿನ ಅಭಿವೃಧ್ಧಿಗೆ ಹೋರಾಟ ಅನಿವಾರ್ಯವಾಗಿದ್ದು,ಇದನ್ನು ಅರಿತು ಯುವಕರು ಕನ್ನಡ ಸೇನೆಗೆ ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು. ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಗನೂರ ಮಾತನಾಡಿ, ಕನ್ನಡ ಸೇನೆಯು ರಾಜ್ಯದಲ್ಲಿನ ಎಲ್ಲ ಸಂಘಟನೆಗಳಿಗೆ ಮಾದರಿಯಾಗಿದೆ.ಸಂಘಟನೆಯ ಘನತೆಗೆ ಕುಂದು ಬಾರದಂತೆ ನಾಡು ನುಡಿ ಸೇವೆಯ ಜೊತೆಗೆ ಸ್ಥಳಿಯ ಸಮಸ್ಯೆಗಳ ನಿವಾರಣೆಗೆ ಹೋರಾಟ ಮಾಡುವ ಮೂಲಕ ಸಂಘಟನೆ ಬಲ ಪಡಿಸುವಂತೆ ನೂತನ ಪದಾಧಿಕಾರಿಗಳಿಗೆ ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ನಗರ ಘಟಕದ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.ರಾಜು ಕುಮಾರ ನಾಯಕ ಗೌರವಾಧ್ಯಕ್ಷ, ಅಕ್ಷಯ ಕುಮಾರ ಕಟ್ಟಿಮನಿ ಅಧ್ಯಕ್ಷ, ರಾಘು ನಾಯಕ,ಶ್ರೀನಿವಾಸ ನಾಯಕ ಉಪಾಧ್ಯಕ್ಷ,ಪ್ರಮೋದ ನಾಯಕ ಕಾರ್ಯಧ್ಯಕ್ಷ,ವಿನೋದಗೌಡ ಪ್ರಧಾನ ಕಾರ್ಯದರ್ಶಿ,ನಾಗರಾಜ ನಾಯಕ ವಕ್ತಾರ,ಮಂಜುನಾಥ ಪತ್ತಾರ ಸಂಚಾಲಕ,ಮೌನೇಶ ಪತ್ತಾರ,ಶರತ್ ಕಟ್ಟಿಮನಿ,ಸಲಿಂ ಮುಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಯಿತು.

ಸಭೆಯಲ್ಲಿ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕವಡಿಮಟ್ಟಿ, ಗೌರವಾಧ್ಯಕ್ಷ ಸೋಮು ನಾಯಕ, ಮುಖಂಡರಾದ ಕೃಷ್ಣಪ್ಪ ನಾಯಕ,ದೇವು ನಾಯಕ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here