ಶಿಕ್ಷಣ ಕ್ಷೇತ್ರ ನೋಡಿದರೆ ಕಾರ್ಮಿಕರನ್ನು ನಿರ್ಮಿಸುವ ಒಂದು ಕಾರ್ಖಾನೆಯಾಗಿದೆ: ಶೈಲಾ ಅಂಜುಟಗಿ

0
87

ಕಲಬುರಗಿ: ಭಾರತದ ಮಣ್ಣಿನ ವಿಶೇಷತೆ ಎಂದರೆ, ಒಂದು ವೃತ್ತಿಯನ್ನು ಕೇವಲ ವೃತ್ತಿಯರೀತಿಯಲ್ಲಿಕಾಣದೇ, ಮಾಡುವ ಕೆಲಸದಲ್ಲಿಕಾಯಕದಲ್ಲಿದೇವರನ್ನುಕಾಣುತ್ತೇವೆ. ಅದಕ್ಕೆ ಬಸವಣ್ಣನವರುಕೂಡಕಾಯಕವೇ ಕೈಲಾಸ ಎಂದಿದ್ದು. ಆದರೆ ಇಂದು ಶಿಕ್ಷಣ ಕ್ಷೇತ್ರ ನೋಡಿದರೆ ಕಾರ್ಮಿಕರನ್ನು ನಿರ್ಮಿಸುವ ಒಂದು ಕಾರ್ಖಾನೆ ರೀತಿ ಇಂದಿನ ಶಿಕ್ಷಣ ಪದ್ದತಿ ಕೆಲಸಗಾರರನ್ನು ತಯಾರಿಸುತ್ತಿದಯೇ ಹೊರತು ವ್ಯಕ್ತಿತ್ವವನ್ನು ನಿರ್ಮಿಸುವುದಿಲ್ಲ. ಶಿಕ್ಷಕರ ಬೋಧನೆ ವ್ಯಕ್ತಿತ್ವ ನಿರ್ಮಿಸುವಂತಿರಬೇಕು ಎಂದು ಎಂದು ಶ್ರೀ ವೀರಸಂಗಮೇಶ್ವರ ವಿದ್ಯಾಪೀಠದ ಕಾರ್ಯದರ್ಶಿಗಳಾದ ಶೈಲಾ ರಾಯಗೊಂಡಪ್ಪ ಅಂಜುಟಗಿ ಅವರು ಕರೆ ನೀಡಿದರು.

ಇತ್ತೀಚೆಗೆ ಅಫಜಲ್ಪೂರಿನ ಶಿರವಾಳದಲ್ಲಿರುವ ಶ್ರೀ ವೀರಸಂಗಮೇಶ್ವರ ವಿದ್ಯಾಪೀಠದಲ್ಲಿ ನಡೆದ ಶಿಕ್ಷಕರಿಗಾಗಿ ಜರುಗಿದ ಬೋಧನಾ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು,ಮೊದಲುಗುರುವೇ ನಮಃ, ಅನ್ನುವುದು ಈಗ ಗುರುವೇನ್ ಮಹಾ ಎಂದಾಗುತ್ತಿದೆ. ಇದುತುಂಬ ಆತಂಕಕಾರಿ ಸಂಗತಿ. ನಿಟ್ಟಿನಲ್ಲಿ ಮಕ್ಕಳಲ್ಲಿನ ವಿಶೇಷ ಕೌಶಲ್ಯಗಳನ್ನು ಗುರ್ತಿಸಿ ಅವರಲ್ಲಿನ ಪ್ರತಿಭೆ ಹೊರತೆಗೆಯುವ ಕೆಲಸ ಶಿಕ್ಷಕರಿಂದಾಗಬೇಕಾಗಿದೆ. ಆವಾಗಲೇ ಡಾ..ಪಿ,ಜೆ.ಅಬ್ದುಲ್ ಕಲಾಂ ಅವರ ಭಾರವನ್ನುಒಂದು ವಿಶ್ವಶಕ್ತಿದೇಶವನ್ನಾಗಿ ನಿರ್ಮಿಸಲು ಸಾಧ್ಯವಾಗುತ್ತದೆಎಂದು ಮಾರ್ಮಿಕವಾಗಿ ನುಡಿದರು.

Contact Your\'s Advertisement; 9902492681

ತರಬೇತಿ ನೀಡಲು ಬೆಂಗಳೂರಿನಿಂಧ ಆಗಮಿಸಿದ ಮನೋತಜ್ಙ ಹಾಗೂ ಶೈಕ್ಷಣಿಕತಜ್ಞ, ಭುಜಬಲಿ ಬೋಗಾರಅವರು ಶಿಕ್ಷಕರಿಗೆ ಆಪ್ತ ಸಮಾಲೋಚನೆಯ ವಿವಧ ಸ್ತರಗಳನ್ನು ಪ್ರಾಯೋಗಿಕ ತಂತ್ರಗಳ ಮೂಲಕ ಮನದಟ್ಟು ಮಾಡಿಕೊಟ್ಟರು. ಉಪನ್ಯಾಸಕರಾಗಿಕಾಲೇಜಿಗೆ ಹೋಗುವಾಗ ಮನಸ್ಸಿನಲ್ಲಿರುವ ಆತಂಕ, ಗೊಂದಲ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗಿ ಪಾಠ ಮಾಡಬಾರದು. ಬದಲಾಗಿಎಲ್ಲವನ್ನು ಮರೆತು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಉಪನ್ಯಾಸಕರಾಗಿ ಬೋಧನೆ ಮಾಡಬೇಕು. ಮನೆಗೆ ಹೋಗುವಾಗಲೂ ಕಾಲೆಜಿನಲ್ಲಿರುವ ಯಾವುದೇ ರೀತಿಯ ಆಂತರಿಕ ಒತ್ತಡವನ್ನು ತೆಗೆದುಕೊಂಡು ಹೋಗದೇಒಬ್ಬ ಸಹೋದರಿಯಾಗಿ, ತಾಯಿಯಾಗಿ, ಹೆಂಡತಿಯಾಗಿ ತಮ್ಮ ತಮ್ಮ ಜವಾಬ್ದಾರಿಯನ್ನು ಪ್ರಜ್ಞಾಪೂರ್ವಕವಾಗಿ ನಿಭಾಯಿಸಬೇಕು ಎಂದರು.

ವೃತ್ತಿಜೀವನದಲ್ಲಿ ಪ್ರಗತಿ ಹಾಗು ವೈಯಕ್ತಿಕಜೀವನದಲ್ಲಿ ನೆಮ್ಮದಿಯಿಂದ ಯಶಸ್ವಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ತರಬೇತಿ ಶಿಬಿರದ ಕಾರ್ಯಕ್ರಮದಲ್ಲಿ ಮೌನಯೋಗಿ ಫೌಂಡೇಶನ್ನ ಅಧ್ಯಕ್ಷರಾದ ಶ್ರಾವಣಯೋಗಿ ಹಿರೇಮಠ, ಕಾಲೇಜಿನ ಪ್ರಾಂಶುಪಾಲ ಭಗವಂತರಾಯ ಶಿಕ್ಷಕ ವೃಂದದವರೆಲ್ಲರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here