ಕವಿತಾಳ ಪಟ್ಟಣ ಪಂಚಾಯತಿಯಲ್ಲಿ ಅವ್ಯವಹಾರ ತನಿಖೆಗೆ ಎಸ್.ಎಫ್.ಐ ಹಾಗೂ DYFI ಸಂಘಟನೆ ಆಗ್ರಹ

0
26

ರಾಯಚೂರು: ಕವಿತಾಳ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸದಸ್ಯರು ಮತ್ತು ಅಧಿಕಾರಿಗಳಿಂದ ಶೌಚಾಲಯ ನಿರ್ಮಾಣದಲ್ಲಾದ ಭ್ರಷ್ಟಾಚಾರವನ್ನು ಸೂಕ್ತ ತನಿಖೆಗೆ ಒತ್ತಾಯಿಸಿ ಹಾಗೂ ರಸ್ತೆ ಆಗಲೀಕರಣ ಕಾಮಗಾರಿ ಪ್ರಾರಂಭಕ್ಕೆ ಆಗ್ರಹಿಸಿ ಮತ್ತು ಪಟ್ಟಣಕ್ಕೆ ಇತರ ಆಗತ್ಯ ಮೂಲಭೂತ ಸಾರ್ವಜನಿಕ ಸೌಕರ್ಯಗಳ ಈಡೇರಿಕೆಗಾಗಿ ಕವಿತಾಳ ಪಟ್ಟಣ ಪಂಚಾಯತಿ ಮುಂಭಾಗದಲ್ಲಿ DYFI, SFI ಜೈ ಭಾರತ್ ಸಂಘ, ಕವಿತಾಳ ನವ ನಿರ್ಮಾಣ ವೇದಿಕೆ, ವಾಲ್ಮೀಕಿ ಸಂಘಟನೆ ಸೇರಿದಂತೆ ಇತರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಹೋರಾಟ ನಡೆಯಿತು.

ಹೋರಾಟವನ್ನು ಉದ್ದೇಶಿಸಿ SFI  ಸಂಘಟನೆ ಜಿಲ್ಲಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಪಟ್ಟಣವು ಶುದ್ಧ ಕುಡಿಯುವ ನೀರು, ರಸ್ತೆ ಅಗಲೀಕರಣ, ಶೌಚಾಲಯ, ಹಕ್ಕುಪತ್ರ, ಮುಟೇಷನ್ ಸಮಸ್ಯೆ, ವಿದ್ಯುತ್ ದೀಪ, ಜನತಾ ಮನೆ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಇದಕ್ಕೆ ಪರಿಹಾರ ಹುಡಬೇಕಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ಜವಾಬ್ದಾರಿ ಯನ್ನು ಮರೆತು ಭ್ರಷ್ಟಾಚಾರ ದಲ್ಲಿ ತೊಡಗಿದ್ದಾರೆ. ಇಂತಹ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಜನತೆ ಪಾಠ ಕಲಿಸಬೇಕಿದೆ ಶೌಚಾಲಯ ನಿರ್ಮಾಣದಲ್ಲಿ ಸ್ವತಃ ಸದಸ್ಯರೆ ನೇರ ಫಲಾನುಭವಿಗಳಾಗಿ ಮತ್ತು ಕುಟುಂಬಸ್ಥರನ್ನು ಬಳಕೆ ಮಾಡಿ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುವುದರ ಜೊತೆಗೆ ಇತರ ಕಾಮಗಾರಿಯಲ್ಲೂ ಸಾರ್ವಜನಿಕರ ಲಕ್ಷಾಂತರ ರೂಪಾಯಿ ಹಣವನ್ನು ಲಪಟಾಯಿಸಿದ್ದಾರೆ. ಇದರ ಬಗ್ಗೆ ನಾವು ಈಗಾಗಲೇ ಜಿಲ್ಲೆಯ ಮೇಲಾಧಿಕಾರಿಗಳಾದ ಪಿ.ಡಿ ಮತ್ತು ಡಿ.ಸಿ ಯವರಿಗೆ ದಾಖಲೆ ಸಮೇತವಾಗಿ ದೂರು ಕೊಟ್ಟರು ಕ್ರಮಕ್ಕೆ ಮುಂದಾಗಿರುವುದು ಅವರ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುತ್ತದೆ ಈ ಕೂಡಲೇ ಇವರು ಎಚ್ಚತ್ತುಕೊಂಡು ಸೂಕ್ತ ತನಿಖೆಗೆ ಮುಂದಾಗಬೇಕು ಜೊತೆಗೆ ಭ್ರಷ್ಟಾಚಾರ ದಲ್ಲಿ ಭಾಗಿಯಾದ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡಬೇಕು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನಿನ ಶಿಕ್ಷೆಗೆ ಒಳಪಡಿಸಿ ಪಟ್ಟಣಕ್ಕೆ ಬೇಕಾದ ಎಲ್ಲಾ ಆಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಬೇಕು ನಿರ್ಲಕ್ಷ್ಯ ತೋರಿದಲ್ಲಿ ಮುಂದೆ ಕವಿತಾಳ ಬಂದ್ / ರಸ್ತೆ ತಡೆ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದರು.

Contact Your\'s Advertisement; 9902492681

ಈ ಸಂಧರ್ಭದಲ್ಲಿ DYFI ರಾಜ್ಯ ಸಮಿತಿ ಸದಸ್ಯರಾದ ಶಿವಪ್ಪ ಬ್ಯಾಗವಾಟ್, DYFI ಅಧ್ಯಕ್ಷರಾದ ರಫೀ ಬೋದೆಲ್, ಜೈ ಭಾರತ್ ಸಂಘಟನೆಯ ಅಧ್ಯಕ್ಷರಾದ ಜಹಾಂಗೀರ್ ಪಾಷ. ಪಟ್ಟಣದ ಮುಖಂಡರಾದ ಭೀಮನಗೌಡ ವಂದ್ಲಿ, ಶಿವಣ್ಣ ವಕೀಲ, ವಾಲ್ಮೀಕಿ ಸಂಘಟನೆಯ ಹನುಮನಗೌಡ ನಾಯಕ, ಜಾವೀದ್ ಎಂ.ಎಸ್. ಲಿಂಗರಾಜ ಕಂದಗಲ್, ಶೇಖರಪ್ಪ ಸಾಹುಕಾರ್, ಎಂ.ಡಿ ಮೈಬೂಬ್ ಸಾಬ್, ಕಿರಿಲಿಂಗ ಮ್ಯಾಗಳಮನಿ, ಪ್ರದೀಪ್ ಕುಮಾರ್ ಜಗ್ಲಿ, ಕೀಶನ್ ಸಿಂಗ್, ಸೈಯದ್ ಮುನ್ನಾವರ್, ಮಲ್ಲಪ್ಪ ಬಸ್ಸಾಪುರ, ರಮೇಶ ಚಿಕ್ಕಬಾದರದಿನ್ನಿ, ಇರ್ಷಾದ್ ಅಂಜುಮನ್, ಸುರೇಶ, ಬಾಬು,  ಮೈಬೂಬ್ ಪಾಷ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here