ಅಪಘಾತದಲ್ಲಿ ಮಡಿದವಳ ಕುಟುಂಬಕ್ಕೆ ಧನ್ಯೋಸ್ಮಿ ಭರತ ಭೂಮಿ ನೆರವು

0
108

ಸುರಪುರ: ನಗರದ ತಿಮ್ಮಾಪುರದ ನಿವಾಸಿ ಮರೆಮ್ಮ ಭೀಮರಾಯ ಶೆಟ್ಟಿ ಎಂಬ ಮಹಿಳೆ ಕಳೆದ ಕೆಲ ದಿನಗಳ ಹಿಂದೆ ಶಹಾಪುರ ತಾಲ್ಲೂಕಿನ ಹತ್ತಿಗುಡೂರ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಮೃತಳಾಗಿದ್ದಳು.

ಕುಟುಂಬದ ಇಡೀ ಜವಾಬ್ದಾರಿಯನ್ನು ತಾನೆ ನಿಭಾಯಿಸುತ್ತಿದ್ದ ಮರೆಮ್ಮಳ ಸಾವಿನಿಂದ ಇಡೀ ಕುಟುಂಬ ತೀವ್ರ ತೊಂದರೆ ಹೆದರಿಸುತ್ತಿತ್ತು.ಇದನ್ನು ಅರಿತ ನಗರದ ರಂಗಂಪೇಟೆಯ ಧನ್ಯೋಷ್ಮಿ ಭರತ ಬೂಮಿ ತಂಡವು ಮೃತಳಾದ ಮರೆಮ್ಮಳ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಮಾನವಿಯತೆ ಮೆರೆದಿದ್ದಾರೆ.

Contact Your\'s Advertisement; 9902492681

ಮರೆಮ್ಮಳ ಕುಟುಂಬಸ್ಥರ ಬದುಕಿಗೆ ಆಸರೆಯಾದ ಧನ್ಯೋಷ್ಮಿ ಭರತ ಭೂಮಿ ತಂಡದ ಪ್ರಸನ್ನ ಹೆಡಗಿನಾಳ,ಯಲ್ಲಪ್ಪ ತೆಲಗೂರು,ಅಯ್ಯಪ್ಪ ತೆಲಗೂರು,ದಯಾನಂದ ತೋಟದ,ನಂದು ಪಾಣಿಭಾತೆ,ಶ್ರೀಕಾಂತ ಸೇಡಂ,ರಾಮಪ್ರಸಾದ ತೋಟದ ಮತ್ತಿತರೆ ಸದಸ್ಯರ ಕಾರ್ಯಕ್ಕೆ ನಗರದ ಎಲ್ಲರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here