ಆಂತರ್ಯ ವಿಜ್ಞಾನ ಅರಿತವನೇ ನಿಜವಾದ ಗುರು: ಮನೋತಜ್ಞ ಭುಜಬಲಿ ಉವಾಚ

0
74

ಕಲಬುರಗಿ: ಮಹಾಭಾರತ ಕಾಲದ ಶಿಕ್ಷಣ ಪದ್ಧತಿಯನ್ನು ಅವಲೋಕಿಸಿದರೆ, ದ್ರೋಣಾಚಾರ್ಯರು ಎಲ್ಲ ಶಿಷ್ಯರಿಗೂ ಒಂದೇ ರೀತಿಯ ಪದ್ಧತಿಯಲ್ಲಿ ಬೋಧನೆ ಮಾಡದೇ, ಶಿಷ್ಯರಲ್ಲಿ ಅಡಗಿರುವ ವಿಶಿಷ್ಟ ಕೌಶಲ್ಯ ಅಭಿರುಚಿ ಶಕ್ತಿಗಳನ್ನು ಗುರ್ತಿಸಿ ಅದನ್ನು ತರಬೇತುಗೊಳಿಸುತ್ತಿದ್ದರು.ಈ ಆಂತರ್ಯ ವಿಜ್ಞಾನದ ರಹಸ್ಯವನ್ನರಿತು (ಎನ್ ಎಲ್ ಪಿ) ನ್ಯೂರೊ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್ ತಿಳಿದುಕೊಂಡು ಪಾಠ ಮಾಡಿದರೆ ವಿದ್ಯಾರ್ಥಿಗಳಲ್ಲಿ ಉತ್ತಮ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಬಹುದಾಗಿದೆ ಎಂದು ಬೆಂಗಳೂರಿನ ಟ್ರಾನ್ಸ್‌ಫಾರ್ಮೋ ಇನ್‌ಕಾರ್ಪ್ ತರಬೇತಿ ಸಂಸ್ಥೆಯ ಮನೋತಜ್ಞ ಹಾಗೂ ಶೈಕ್ಷಣಿಕ ತಜ್ಞ ಭುಜಬಲಿ ಬೋಗಾರ್ ಹೇಳಿದರು.

ಇಂದು ತಾಳಿಕೋಟಿಯ ಮೈಲೇಶ್ವರದಲ್ಲಿರುವ ಬ್ರಿಲ್ಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಿಗೆ ಪರಿಣಾಮಕಾರಿ ಬೋಧನಾ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು,ಭೀಮ ಧೃಢಕಾಯನಾಗಿದ್ದರಿಂದಲೇ ಅವನಿಗೆ ಗಧಾಯುದ್ಧವನ್ನು, ಅರ್ಜುನನಲ್ಲಿ ತೀಕ್ಷ್ಣ ದೃಷ್ಟಿ ಇದ್ದುದರಿಂದ ಬಿಲ್ವಿದ್ಯೆಯನ್ನು ಕಲಿಸಿದರು.

Contact Your\'s Advertisement; 9902492681

ಇಲ್ಲದಿದ್ದರೆ ಇವತ್ತಿನ ಬಹುತೇಕ ಶಿಕ್ಷಕರ ಹಾಗೇ ಒಂದು ವೇಳೆ ಎಲ್ಲ ಶಿಷ್ಯರಿಗೂ ಒಂದೇ ರೀತಿಯಾಗಿ ಒಂದೇ ವಿದ್ಯೇಯನ್ನು ಕಲಿಸಿಕೊಟ್ಟಿದ್ದರೆ ಮಹಾಭಾರತದ ಚಿತ್ರಣವೇ ಬೇರೆಯಾಗಿರುತ್ತಿತ್ತು. ಈ ನಿಟ್ಟಿನಲ್ಲಿ ಮಕ್ಕಳಲ್ಲಿನ ವಿಶೇಷ ಕೌಶಲ್ಯಗಳನ್ನು ಗುರ್ತಿಸಿ ಅವರಲ್ಲಿನ ಪ್ರತಿಭೆ ಹೊರತೆಗೆಯುವ ಕೆಲಸ ಶಿಕ್ಷಕರಿಂದಾಗಬೇಕಾಗಿದೆ. ಹಾಗಾಗಿ ಶಿಕ್ಷಕರು ತಮ್ಮ ವ್ಯಕ್ತಿತ್ವವನ್ನು ಪ್ರಭಾವಶಾಲಿ ಹಾಗೂ ಮಾದರಿಯಾಗಿಸಿಕೊಳ್ಳಲು ಪರಿಣಾಮಕಾರಿ ಬೋಧನೆಗೆ ಈ ರೀತಿಯ ತರಬೇತಿ ಕಾರ್ಯಾಗಾರಗಳು ಅತ್ಯವಶ್ಯಕವಾಗಿವೆ ಎಂದು ಹೇಳಿದರು.

ಶಿಕ್ಷಕರಿಗಾಗಿ ಟೀಚಿಂಗ್ ಎಕ್ಸಲೆನ್ಸ್ ವಿಥ್ ಎನ್.ಎಲ್.ಪಿ ಅನ್ನುವ ಕಾರ್ಯಾಗಾರ ಶಿಬಿರವನ್ನು ಆಯೋಜಿಸಿದ್ದು ಬಹಳ ಸೂಕ್ತ ಮತ್ತು ಅತಿ ಅವಶ್ಯಕವಾಗಿದೆ. ತರಬೇತಿ ನೀಡಲು ಬೆಂಗಳೂರಿನಿಂದ ಆಗಮಿಸಿದ ಮನೋತಜ್ಞ ಹಾಗೂ ಶೈಕ್ಷಣಿಕ ತಜ್ಞ, ಭುಜಬಲಿ ಬೋಗಾರ ಅವರಿಗೂ ನಾನು ಅಭಿನಂದನೆ ಹೇಳುತ್ತೇನೆ, ಶಿಕ್ಷಕವರ್ಗದವರಾದ ತಾವೆಲ್ಲರೂ ಈ ತರಬೇತಿ ಶಿಬಿರದ ಸದುಪಯೋಗ ಪಡೆದು ಅತ್ಯುತ್ತಮ ಶಿಕ್ಷಕರಾಗಿ ಕಾರ್ಯರ್ನಿಹಿಸಿ. ಆವಾಗಲೇ ಡಾ.ಏ.ಪಿ,ಜೆ.ಅಬ್ದುಲ್ ಕಲಾಂ ಅವರ ಭಾರತವನ್ನು ಒಂದು ವಿಶ್ವಶಕ್ತಿ ದೇಶವನ್ನಾಗಿ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಬ್ರಿಲ್ಲಿಯಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಾನಾಗೌಡ ನಡುವಿನಮನಿ ಅವರು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಮೌನಯೋಗಿ ಫೌಂಡೇಶನ್ನಿನ sಸಂಸ್ಥಾಪಕ ಅಧ್ಯಕ್ಷರಾದ ಶ್ರಾವಣಯೋಗಿ ಹಿರೇಮಠ,ಬ್ರಿಲ್ಲಿಯಂಟ್ ಶಾಲೆಯ ಆಡಳಿತ ಮಂಡಳಿ ಸದಸ್ಯರು,ಉಪಾಧ್ಯಕ್ಷರು,ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here