‘ಬಸವ ಸಿರಿ’ ಪ್ರಶಸ್ತಿ ಪ್ರದಾನ: ಬಸವ ಪಾರಾಯಣ ಬಿಡಿ, ಬಸವ ಪ್ರಜ್ಞೆ ಬೆಳೆಸಿ

0
105

ಕಲಬುರಗಿ: ಧರ್ಮಶಾಸ್ತ್ರ ಸಂವಿಧಾನವಲ್ಲ. ಮಹಿಳೆಯರ ಬದುಕಿಗೆ ಶರಣರು ಬೆಲೆ ತಂದುಕೊಟ್ಟರು ಎಂದು ಗುಲ್ಬರ್ಗ ವಿವಿಯ ಪ್ರಸಾರಂಗದ ನಿರ್ದೇಶಕರಾದ ಡಾ.ಎಚ್.ಟಿ. ಪೋತೆ ಅಭಿಪ್ರಾಯಪಟ್ಟರು.

ಅವರು ಬಸವ ಪ್ರಕಾಶನ ಕಲಬುರಗಿ ಹಾಗೂ ಸಂಸ್ಥಾಪಕ ಲಿಂ. ಬಸಮ್ಮಬ. ಕೊನೇಕ ರವರ 6ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ‘ಬಸವ ಸಿರಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಚರಿತ್ರೆಯ ಸಂರಕ್ಷಣೆ ಪ್ರಜ್ಞೆ ಭಾರತೀಯರಲ್ಲಿ ಇಲ್ಲ. ಬಸವ ಪಾರಾಯಣ ಬಿಡಿ, ಬಸವ ಪ್ರಜ್ಞೆ ಬೆಳಸಿ ಎಂದು ಅವರು ಕರೆ ನೀಡಿದರು.

Contact Your\'s Advertisement; 9902492681

ಬಸವ ಸಿರಿ ಪ್ರಶಸ್ತಿ ಪುರಸ್ಕೃತರಾದ ಜಮಖಂಡಿಯ ಬಸವಜ್ಞಾನ ಗುರುಕುಲದ ಶರಣ ಡಾ. ಈಶ್ವರ ಮಂಟೂರ ಅವರಿಗೆ ಬಸವ ಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ವ್ಯಕ್ತಿಗೆ ಪಟ್ಟ ಕಟ್ಟುವ ಬದಲು ಕಾಯಕಕ್ಕೆ ಪಟ್ಟ ಕಟ್ಟಬೇಕು. ಕಾಡು ಪ್ರಾಣಿಗಳು ಕಾಡಿನಲ್ಲಿವೆ. ಕಾಡಿನ ಪ್ರಾಣಿಗಳು ನಾಡಿನಲ್ಲಿವೆ ಎಂದರು.

ನನಗೆ ಕೊಟ್ಟಿರುವ 11 ಸಾವಿರ ಮೊತ್ತದ ಪ್ರಶಸ್ತಿ ಮೊತ್ತವನ್ನು 11 ಜನ ಕಾಯಕ ಜೀವಿಗಳಿಗೆ ತಲಾ ಒಂದು ಸಾವಿರ ನೀಡಿ ಗೌರವಿಸುತ್ತೇನೆ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಸ್ವಾಮಿರಾವ ಕುಲಕರ್ಣಿ ಮಾತನಾಡಿ, ಮಹಿಳೆಯಿಂದಲೇ ಮನೆ, ಮನೆತನ ಉಚ್ರಾಯ ಸ್ಥಿತಿಯಲ್ಲಿ ಬರಲಿದೆ ಎನ್ನುವುದಕ್ಕೆ ಲಿಂ. ಬಸಮ್ಮ ಬ. ಕೊನೇಕ್ ಸಾಕ್ಷಿಯಾಗಿದ್ದರು ಎಂದು ತಿಳಿಸಿದರು.

ಬಸವರಾಜ ಕೊನೇಕ್, ಶರಣಬಸವ, ಸಿದ್ದು ಕೊನೇಕ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here