ರಾಜನಹಳ್ಳಿಯಲ್ಲಿ ೨ನೇ ಮಹರ್ಷಿ ವಾಲ್ಮೀಕಿ ಜಾತ್ರೆ: ಜೇವರ್ಗಿಯಲ್ಲಿ ಸಿದ್ಧತಾ ಸಭೆ

0
45

ಜೇವರ್ಗಿ: ಎರಡನೇ ಮಹರ್ಷಿ ವಾಲ್ಮಿಕಿ ಜಾತ್ರೆ, ಶ್ರೀಮಠದ ೨೨ನೇ ವಾರ್ಷಿಕೋತ್ಸವ ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮಿಜಿಯವರ ೧೩ನೇ ವರ್ಷದ ಪುಣ್ಯಾರಾಧನೆ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ್ ಮಹಾಸ್ವಾಮಿಜಿಯರವರ ೧೨ನೇ ವರ್ಷದ ಪಟ್ಟಾಧಿಕಾರ ಮಹೋತ್ಸವಕ್ಕೆ ಯಡ್ರಾಮಿ ಹಾಗೂ ಜೇವರ್ಗಿ ತಾಲ್ಲೂಕಿನ ಜನತೆ ಭಾಗವಹಿಸಬೇಕೆಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಿ ಕರೆ ನೀಡಿದರು.

ಕಳೆದ ವರ್ಷ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು, ಸುಮಾರು ೩ ಲಕ್ಷ ಜನ ಸೇರಿದ್ದು, ಈ ವರ್ಷ ರಾಜನಹಳ್ಳಿಯಲ್ಲಿ ಪೆಬ್ರವರಿ ೮ ಮತ್ತು ೯ರಂದು ನಡೆಯುವ ಕಾರ್ಯಕ್ರಮಕ್ಕೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮಲು ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ. ಸುಮಾರು ೧೦ ಲಕ್ಷಕ್ಕೂ ಅಧಿಕ ಜನ ಸೇರುವ ನೀರಿಕ್ಷೆ ಇದ್ದು, ಈ ಒಂದು ಕಾರ್ಯಕ್ರಮಕ್ಕೆ ರಾಜ್ಯದ ವಾಲ್ಮೀಕಿ ಸಮುದಾಯದ ಎಲ್ಲ ಜನರು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪ್ರಸನ್ನಾನಂದ್ ಮಹಾಸ್ವಾಮೀಜಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವದ ಭಿತ್ತಿ ಪತ್ರಗಳು ಬಿಡುಗಡೆಗೊಳಿಸಿದರು.

Contact Your\'s Advertisement; 9902492681

ಜೇವರ್ಗಿ ತಾಲ್ಲೂಕು ಅಧ್ಯಕ್ಷ ಈರಘಂಟೆಪ್ಪ ವಡಗೇರಾ, ಯಡ್ರಾಮಿ ತಾಲ್ಲೂಕು ಅಧ್ಯಕ್ಷ ವೆಂಟಕೇಶ್ ಬಳಬಟ್ಟಿ, ತಾಯಪ್ಪ ನಾಯಕ್, ಶ್ರವಣಕುಮಾರ್ ಡಿ. ನಾಯಕ್, ಹಣಮಂತ್ರಾಯ್ ಹವಲ್ದಾರ್, ಸಾಯಬಣ್ಣ ಚಿಗರಹಳ್ಳಿ, ವಿಶ್ವನಾಥ್ ಸುಭೇದಾರ್, ಸಿದ್ದಣ್ಣ ಹಾಲಗಡ್ಲಾ, ದೇವು ಚನ್ನೂರ್, ಶೇಖರ್ ದೊರೆ, ಚಂದ್ರು ಮಲ್ಲಾಬಾದ್, ನಿಂಗು ಅವರಾದ್, ಮರೆಪ್ಪ ಹಸನಾಪೂರ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here