ಅಜಾತಶತ್ರು ನಾಡಿನ ಜನರ ಹೃದಯದಲ್ಲಿ ಇದ್ದಾರೆ: ಡಾ.ಅಜಯಸಿಂಗ್

0
66

ಜೇವರ್ಗಿ: ಅಜಾತಶತ್ರು, ಜನನಾಯಕ ಮಾಜಿ ಮುಖ್ಯಮಂತ್ರಿ ದಿ.ಡಾ.ಎನ್. ಧರ್ಮಸಿಂಗ್ ಅವರ 83 ನೇಯ ಜನ್ಮ ದಿನಾಚರಣೆ ನೆಲೋಗಿ ಗ್ರಾಮದಲ್ಲಿ ಆಚರಣೆ ಮಾಡಲಾಯಿತು.

ಈ ಬಾರಿ ಅತ್ಯಂತ ಸರಳರೀತಿಯಲ್ಲಿ ಆಚರಣೆ ಎಲ್ಲರಿಗೂ ಮಾದರಿ ಆದರೂ, ನೆರೆ ಇದ್ದಕಾರಣ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಗಳ ಮಧ್ಯೆ ಆಚರಣೆ ಮಾಡುವುದು ಮಾದರಿ ಕಾರ್ಯಕ್ರಮ ಮಾಡೋಣ ಎಂದು ಡಾ.ಅಜಯಸಿಂಗ್ ಹೇಳಿದರು.

Contact Your\'s Advertisement; 9902492681

ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ಸಾಹೇಬರು ಇಲ್ಲದ ಮೂರನೇ ವರ್ಷದ ಜನ್ಮದಿನ ಆಗಿದೆ. ಇಡೀ ನಾಡಿನ ಜನತೆಯ ಹೃದಯದಲ್ಲಿ ಅಜಾತಶತ್ರು ಧರ್ಮಸಿಂಗ್ ಇದ್ದಾರೆ. ನಾವು ದಿನಾಲೂ ಒಂದು ಬಾರಿ ಅಲ್ಲ ಹತ್ತು ಬಾರಿ ನಮ್ಮ ಸಾಹೇಬರು ನೆನಪು ಮಾಡಿಕೊಳ್ಳುತ್ತೇನೆ ಎಂದು ಹೇಳಿದರು. ನೆಲೋಗಿ ಗ್ರಾಮದ ಬಲಭೀಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಾಜಿ ಮೇಯರ್ ಸಂಜಯಸಿಂಗ್, ರಾಜಶೇಖರ ಸಿರಿ, ರುದ್ರಗೌಡ ಪಾಟೀಲ ಕಲ್ಲೂರ, ನೀಲಕಂಠ ಮೂಲಗೆ, ಹಣಮಂತ ಭೂಸನೂರ, ನಾಗನಗೌಡ ಯಡ್ರಾಮಿ, ಚಂದ್ರಶೇಖರ್ ಪುರಾಣಿಕ, ಸುತ್ತ ಮುತ್ತಲಿನ ಗ್ರಾಮದ ಜನರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here