ಕಂಕಣ ಸೂರ್ಯ ಗ್ರಹಣ ಬಗ್ಗೆ ಜನರಲ್ಲಿದ್ದ ಭಯವನ್ನು ನಿವಾರಿಸುವ ನಿಟ್ಟಿನಲ್ಲಿ ವೈಚಾರಿಕ ಜಾಗೃತಿ ಕಾರ್ಯಕ್ರಮ

0
87

ಕಲಬುರಗಿ: ಕಂಕಣ ಸೂರ್ಯ ಗ್ರಹಣ ಬಗ್ಗೆ ಜನರಲ್ಲಿದ್ದ ಭಯವನ್ನು ನಿವಾರಿಸುವ ನಿಟ್ಟಿನಲ್ಲಿ ಇಲ್ಲಿನ ಸಹೃದಯಿ ಸ್ನೇಹ ಬಳಗದ ವತಿಯಿಂದ ಗುರುವಾರದಂದು ನಗರದ ಪ್ರಮುಖ ಬಡಾವಣೆಗಳಿಗೆ ತೆರಳಿ ವೈಚಾರಿಕ ಜಾಗೃತಿ ಮೂಡಿಸುವ ಕಾರ್ಯಕ್ರಮವೊಂದನ್ನು ನಡೆಸಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡಿ, ಗ್ರಹಣ ಎಂಬುದು ಒಂದು ಸಹಜ ಕ್ರಿಯೆಯಾಗಿದೆ. ನಮ್ಮ ಮನದಲ್ಲಿ ಅಡಗಿರುವ ಮೂಢತೆಯಿಂದ ಹೊರಬರಬೇಕಾಗಿದೆ. ಆ ಮೂಲಕ ಸಮಾನತೆ ಮತ್ತು ಮೌಢ್ಯಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದ ಅವರು, ಈ ನಿಟ್ಟಿನಲ್ಲಿ ಸೂರ್ಯ ಗ್ರಹಣವಿರಲಿ, ಚಂದ್ರ ಗ್ರಹಣವಿರಲಿ ಜನರ ಮೇಲೆ ಇವುಗಳಿಂದ ಯಾವುದೇ ತರಹದ ಪರಿಣಾಮ ಬೀರುವುದಿಲ್ಲ. ಹಾಗಾಗಿ, ನಮ್ಮೆಲ್ಲರ ಮನಸ್ಸಿಗೆ ಹಿಡಿದ ಗೃಹಣವನ್ನು ಮೊದಲು ಕಿತ್ತೊಗೆಯಬೇಕು ಎಂದು ಮಾರ್ಮಿಕವಾಗಿ ಹೇಳಿದರು.

Contact Your\'s Advertisement; 9902492681

ಪ್ರಮುಖರಾದ ಅಣಿವೀರಯ್ಯ ಪ್ಯಾಟಿಮನಿ, ಮಲ್ಕಾರಿ ಪೂಜಾರಿ, ಸಂದೇಶ ಕುನ್ನೂರ, ಮಹಾಂತೇಶ ಮಠ, ಡಾ.ಸತೀಶ ದೊಡ್ಡಮನಿ, ಲಕ್ಷ್ಮಣ ಕುಂಬಾರ, ರಾಜಶೇಖರ ಕುರಿ, ಶರಣಕುಮಾರ ಡಿಗ್ಗಿ ಸೇರಿದಂತೆ ಬಡಾವಣೆಗಳ ಪ್ರಮುಖರೂ ಸಹ ಈ ಸಮಾಜಿಕ ಜಾಗೃತಿ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here