ಶಾಸಕ ರಾಜುಗೌಡ ಹುಟ್ಟು ಹಬ್ಬ ಮತ್ತು ಶಾಸಕರ ತಾಯಿ ಆರೋಗ್ಯ ಸುಧಾರಣೆಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ

0
79

ಸುರಪುರ: ಶಾಸಕ ನರಸಿಂಹ ನಾಯಕ (ರಾಜುಗೌಡರ) ಹುಟ್ಟು ಹಬ್ಬದ ಅಂಗವಾಗಿ ಹಾಗೂ ಶಾಸಕ ತಾಯಿಯವರ ಆರೋಗ್ಯ ಸುಧಾರಿಸಿ ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿ ನಗರದ ಶ್ರೀ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ದೇವರಿಗೆ ವಿಶೇಷವಾದ ಪಂಚಾಮೃತ ಅಭಿಷೇಕ ಮತ್ತು ಪೂಜೆ ಸಲ್ಲಿಸಲಾಯಿತು.

ಮತ್ತು ಇದೇ ಸಂದರ್ಭದಲ್ಲಿ ದೇವಸ್ಥಾನದ ಬಳಿ ನಿರ್ಮಿಸಲಾದ ಶುಧ್ಧ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ, ಗ್ಯಾನಚಂದ್ ಜೈನ್,ಭೀಮಣ್ಣ ಬೇವಿನಾಳ,ರಾಜಾ ಜೈರಾಮ್ ನಾಯಕ,ರಮೇಶ ದರಬಾರಿ,ಈಶ್ವರ ನಾಯಕ,ಅಭಿಜಿತ್ ದರಬಾರಿ, ರಾಜಕಿರಣ ರಫುಗಾರ, ಶಶಿಕಾಂತರಡ್ಡಿ, ಶ್ರೀನಿವಾಸ ದೇವರು, ರವಿ ಕುಲ್ಕರ್ಣಿ, ಮಹೇಶ ಪಾಟೀಲ,ಶ್ರೀಪಾದ ಭಟ್ ಗಡದ್,ರವಿ ಗುತ್ತೇದಾರ, ಡಾ. ಶ್ರೀಶೈಲ ಕದರಿ, ನರಸಿಂಹ ಬಾಡಿಯಾಲ,ಹಣಮಂತ್ರಾಯಗೌಡ ಮಂಗಿಹಾಳ, ವಿಶಾಲ ಮಸ್ಕಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here