ಶಾಸಕ ರಾಜುಗೌಡ ಅವರ ಜನ್ಮದಿನದ ಅಂಗವಾಗಿ ರೋಗಿಗಳಿಗೆ ಹಾಲು ಹಣ್ಣು ಹಂಪಲ ವಿತರಣೆ

0
117

ಸುರಪುರ: ಶಾಸಕ ನರಸಿಂಹ ನಾಯಕ(ರಾಜುಗೌಡ)ರ ಹಾಗು ಅವರ ಸಹೋದರ ಹಣಮಂತ ನಾಯಕ (ಬಬ್ಲುಗೌಡ)ರ ಹುಟ್ಟು ಹಬ್ಬದ ಅಂಗವಾಗಿ ರಾಜುಗೌಡ ಗ್ರೌಂಡ್ ಟೀಂ ವತಿಯಿಂದ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನರೆಡ್ಡಿ ನೇತೃತ್ವದಲ್ಲಿ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿನ ಸರಕಾರಿ ಹಾಗು ಖಾಸಗಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಹಾಲು ಹಣ್ಣು ಮತ್ತು ಬ್ರೇಡ್ ವಿತರಿಸಲಾಯಿತು.

ಶಾಲಾ ಮಕ್ಕಳಿಗೆ ಕಾಪಿ ಪೆನ್ನು ಸೇರಿದಂತೆ ಕಲಿಕಾ ಸಾಮಗ್ರಿಗಳ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಶಾಸಕರ ತಾಯಿಯವರ ಆರೋಗ್ಯ ಸುಧಾರಿಸಿ ಬೇಗ ಗುಣಮುಖರಾಗಲೆಂದು ಗ್ರಾಮದ ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ಶರಣು ನಾಯಕ ಬೈರಿಮಡ್ಡಿ,ಶ್ರೀನಿವಾಸ ನಾಯಕ ದರಬಾರಿ,ಖಾನೊಲಪ್ಪ ಮೂಕನೂರ,ಚಿದಾನಂದ ಯಳವಾರ,ಮಹೇಶ ದೇವಾಪುರ,ದೇವಿಂದ್ರಪ್ಪ ದೊಡ್ಮನಿ,ವೇಣುಗೋಪಾಲ ತನಕೇದಾರ,ಬಸ್ಸು ಉಟ್ಕೂರ,ಮಹೇಶ ಯಳವಾರ,ರಾಜು ಬಡಿಗೇರ,ವೆಂಕಟೇಶ ಬಡಿಗೇರ,ಚನ್ನಯ್ಯಸ್ವಾಮಿ,ಶರ್ಮುದ್ದಿನ್ ಮುಲ್ಲಾ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here