Tuesday, July 16, 2024
ಮನೆಬಿಸಿ ಬಿಸಿ ಸುದ್ದಿಕುವೆಂಪು ಅವರ ಆದರ್ಶಗಳು ಸಾರ್ವಕಾಲಿಕ: ಶಿವಣ್ಣ ಇಜೇರಿ

ಕುವೆಂಪು ಅವರ ಆದರ್ಶಗಳು ಸಾರ್ವಕಾಲಿಕ: ಶಿವಣ್ಣ ಇಜೇರಿ

ಶಹಾಪುರ: ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ ಅವರ ಆದರ್ಶ ತತ್ವಗಳು ಸಾರ್ವಕಾಲಿಕ ಎಂದು ಶಹಾಪುರದ ಹಿರಿಯ ಸಾಹಿತಿ, ಪ್ರಗತಿಪರ ಚಿಂತಕ ಶ್ರೀ ಶಿವಣ್ಣ ಇಜೇರಿ ಅವರು ಹೇಳಿದರು.

ಲೇಖಕ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ ಎಂದು ಕುವೆಂಪು ಅವರನ್ನು ಬಣ್ಣಿಸಿದರು.

ಹಿರಿಯ ಸಾಹಿತಿ ದೊಡ್ಡಬಸಪ್ಪ ಬಳೂರಗಿ ಮಾತನಾಡಿ ಜಾತಿಭೇದ, ವರ್ಣಭೇದ, ವಿರುದ್ಧ ತಮ್ಮ ಮೊನಚಾದ ಬರವಣಿಗೆಯ ಮೂಲಕ ವೈಚಾರಿಕತೆಯ ನಿಲುವುಗಳನ್ನು ಮಾನವ ಕುಲಕ್ಕೆ ತೋರಿಸಿಕೊಟ್ಟ ಮಹಾನ್ ಚೇತನ ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ ಮಾತನಾಡಿ ಮನುಷ್ಯನ ಬಾಳಿಗೊಂದು ಬಹಳ ಸುಂದರವಾದ ಅರ್ಥ ನೀಡಿ ಸಂವೇದನೆಯನಾ ಶೀಲತೆಯ ಜೊತೆಗೆ ಸೃಜನಾತ್ಮಕ ಸಾಹಿತ್ಯದ ಮೇರು ಪರ್ವತಕ್ಕೇರಿದ ಮಹಾನ್ ಚೇತನ ಯುಗದ ಕವಿ, ಜಗದ ಕವಿ, ಕುವೆಂಪು ಎಂದು ಬಣ್ಣಿಸಿದರು.

ಶಹಾಪುರ ತಾಲ್ಲೂಕಿನ ತಹಸೀಲ್ದಾರರಾದ ಶ್ರೀ ಜಗನ್ನಾಥ ರೆಡ್ಡಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಈ ಸಮಾರಂಭದ ವೇದಿಕೆಯ ಮೇಲೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀ ನಾಗಣ್ಣ ಎಸ್ ಪೂಜಾರಿ, ನಗರಸಭೆ ಆಯುಕ್ತರಾದ ಬಸವರಾಜ ಶಿವಪೂಜೆ, ಡಾ: ಅಬ್ದುಲ್ ಕರೀಂ ಕನ್ಯಾಕೊಳ್ಳೂರ, ಗುಂಡಪ್ಪ ತುಂಬಿಗಿ, ಶ್ರೀಕಾಂತ್ ಹಾಗೂ ಇತರರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ದೇಂದ್ರಪ್ಪ ಕನ್ಯಾಕೋಳೂರು ಸ್ವಾಗತಿದರು, ಕವಿತಾ ಪತ್ತಾರ, ಪ್ರಾಥ೯ಸಿದರು, ಬಸವರಾಜ ಸಿನ್ನೂರ ನಿರೂಪಿಸಿದರು, ಸಂತೋಷ್ ಉದ್ಧಾರ ವಂದಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular