ಸಿನಿ ಲೋಕದಲ್ಲಿ ಮಿಂಚುತ್ತಿರುವ ಸಗರ ನಾಡಿನ ಯುವಕ

0
136
  • ಬಸವರಾಜ ಸಿನ್ನೂರ

ಶಹಾಪುರ: ಬೆಂಗಳೂರಿನ ಗಾಂಧಿನಗರದ ಸಿನಿ ಲೋಕದಲ್ಲಿ ಮಿಂಚುತ್ತಿರುವ ಸಗರನಾಡಿನ ಯುವಕ ರಘು ಪಡುಕೋಟೆ. ಸದ್ಯಕ್ಕೆ ಇವರು ಯಾರ ಮಗ ಚಿತ್ರದ ಚಿತ್ರೀಕರಣದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ.

ರಘು ಪಡುಕೋಟೆ ಅವರ ತಂದೆ ಬಸವರಾಜ ಪಡುಕೋಟೆ ಸುಮಾರು ೨೫ ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ಬೆಂಗಳೂರಿನ ಶಿವಾಜಿನಗರಕ್ಕೆ ಬಂದು ನೆಲೆ ನಿಂತು ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ ಕಟ್ಟಿ ಕನ್ನಡ ನಾಡು ನುಡಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ ತಮ್ಮ ಸ್ವಂತ ಮಗ ರಘು ಪಡುಕೋಟೆ ಅವರನ್ನು ನಾಯಕ ನಟನನ್ನಾಗಿ ಮಾಡಬೇಕೆಂಬ ಮಹದಾಸೆ ಅವರದಾಗಿತ್ತು ಬಹುದಿನಗಳ ಕನಸು ನನ ಸಾಗುತ್ತಿರುವುದರಿಂದ ಅವರಿಗೆ ತುಂಬಾ ಸಂತೋಷವೆನಿಸುತ್ತಿದೆ.

Contact Your\'s Advertisement; 9902492681

ಚಿತ್ರದ ನಿರ್ದೇಶಕರಾದ ಸುರೇಶ್ ರಾಜ್ ಅವರು ಶಿವಾಜಿ ನಗರದಲ್ಲಿ ತೊಂಬತ್ತರ ದಶಕದಲ್ಲಿ ನಡೆದಿರುವ ನೈಜ ಘಟನೆಯೊಂದನ್ನು ಮುಂದಿಟ್ಟುಕೊಂಡು ಹಾಗೂ ತಾಯಿ ಮತ್ತು ಮಗನ ಬಾಂಧವ್ಯದ,ಪ್ರೀತಿ ವಾತ್ಸಲ್ಯ ಮಮತೆ, ಮಮಕಾರ ಕುರಿತು ಈ ಚಿತ್ರದಲ್ಲಿ ಹೇಳಹೊರಟಿದ್ದಾರೆ.

ಈ ಚಿತ್ರದಲ್ಲಿ ನಾಯಕ ನಟನಾಗಿ ರಘು ಪಡುಕೋಟೆ, ನಾಯಕಿಯಾಗಿ ವಿದ್ಯಾ ಪ್ರಭು, ಛಾಯಾಗ್ರಹಣ ಸಿ.ಎಸ್. ಸತೀಶ್,ಲೋಕಿ ಸಂಗೀತ ಸಂಯೋಜಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here