ರೈತ ಸಂಘದ ಜಿಲ್ಲಾಧ್ಯಕ್ಷ ನೇಮಕ

0
74

ಕಲಬುರಗಿ: ಸಂಘಟನೆಯ ಆಸಕ್ತರು ಮತ್ತು ರೈತರಪರ ಕಾಳಜಿಯುಳ್ಳ ಸುರೇಶ್ ಕೆ ಗುತ್ತೇದಾರ್ ಕರದಾಳ ಅವರನ್ನು ನವಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ದಯಾನಂದ್ ಪಾಟೀಲ್ ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧ್ಯಕ್ಷರಾಗಿ ನೇಮಕವಾದ ತಕ್ಷಣದಿಂದಲೇ ರೈತರ ಸಂಘದ ತತ್ವ-ಸಿದ್ಧಾಂತಗಳು ವಿಚಾರಧಾರೆಗಳನ್ನು ಚಾಚೂ ತಪ್ಪದೆ ಪಾಲಿಸಿ ರೈತರಪರವಾಗಿ ಕ್ರಿಯಾಶೀಲರಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸುವ ಕೆಲಸ ಮಾಡಬೇಕೆಂದು ನೇಮಕಾತಿ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here