Tuesday, July 16, 2024
ಮನೆಬಿಸಿ ಬಿಸಿ ಸುದ್ದಿಯಡ್ರಾಮಿ ಶ್ರೀಗಳಿಂದ ಪ್ರವಚನ ಸಾಮಗ್ರಿ ಬಿಡುಗಡೆ: ಜ. 10 ರಿಂದ ನಿಜಗುಣಸ್ವಾಮೀಜಿ ಪ್ರವಚನ

ಯಡ್ರಾಮಿ ಶ್ರೀಗಳಿಂದ ಪ್ರವಚನ ಸಾಮಗ್ರಿ ಬಿಡುಗಡೆ: ಜ. 10 ರಿಂದ ನಿಜಗುಣಸ್ವಾಮೀಜಿ ಪ್ರವಚನ

ಜೇವರ್ಗಿ: ಬಸವಾದಿ ಶರಣರ ವಿಚಾರಧಾರೆಗಳನ್ನು ಜನರಿಗೆ ತಿಳಿಸಿಕೊಡುವ ಉದ್ದೇಶದಿಂದ ಬರುವ ಜ.೧೦ ರಿಂದ ಫೆ.೦೬ ರ ವರೆಗೆ ಪ್ರವಚನ ಸೇವಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಮುಂಡರಗಿಯ ತೋಂಟದಾರ್ಯ ಮಠ ಹಾಗೂ ಬೈಲೂರ ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿಯ ವಚನ ದರ್ಶನ ಪ್ರವಚನ ಆಯೋಜಿಸಲಾಗಿದೆ ಎಂದು ಯಡ್ರಾಮಿ ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದ ಬಳಿ ಪ್ರವಚನದ ಪೋಸ್ಟರ್, ಸ್ಟಿಕ್ಕರ್ ಸೇರಿದಂತೆ ವಿವಿಧ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪ್ರತಿದಿನ ಸಂಜೆ ೬:೩೦ ರಿಂದ ೭:೩೦ ರ ವರೆಗೆ ನಾಡಿನ ಖ್ಯಾತ ವಾಗ್ಮಿ ನಿಜಗುಣಾನಂದ ಶ್ರೀಗಳಿಂದ ಪ್ರವಚನ ನಡೆಯಲಿದೆ. ಸಮ ಸಮಾಜದ ನಿರ್ಮಾಣ ಮತ್ತು ಸಹೋದರತ್ವ ಹೆಚ್ಚಿಸಲು ಬಸವಾದಿ ಶರಣರ ಚಿಂತನೆಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳುವುದು ಬಹು ಮುಖ್ಯವಾಗಿದೆ. ಹೀಗಾಗಿ ಶರಣರ ಶ್ರೇಷ್ಠ ವಿಚಾರಗಳನ್ನು ಜೇವರ್ಗಿ ಜನರಿಗೆ ಪ್ರವಚನದ ಮೂಲಕ ತಿಳಿಸಿಕೊಡಲಾಗುವುದು. ತಾಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಶಿವಣಗೌಡ ಪಾಟೀಲ ಹಂಗರಗಿ, ಬಸವಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ, ಬಿ.ಎನ್.ಪಾಟೀಲ, ಸದಾನಂದ ಪಾಟೀಲ, ಮಲ್ಲಣಗೌಡ ಕನ್ಯಾಕೋಳೂರ, ಮಲ್ಕಣಗೌಡ ಹೆಗ್ಗಿನಾಳ, ಭಗವಂತ್ರಾಯ ಬೆಣ್ಣೂರ, ಅನೀಲ ರಾಂಪೂರ, ಮಹಾದೇವಪ್ಪ ದೇಸಾಯಿ, ಚಂದ್ರಶೇಖರ ತುಂಬಗಿ, ಭುಜಂಗಪ್ಪ ದೇಶಟ್ಟಿ, ನಿಂಗಣ್ಣಗೌಡ ಹಳಿಮನಿ, ಸುರೇಶ ಹಳ್ಳಿ, ಅಖಂಡು ಕಲ್ಲಾ, ಈರಣ್ಣ ಭೂತಪೂರ, ಡಿ.ಬಿ.ರಾಠೋಡ, ರಾಮಣ್ಣ ತೊನ್ಸಳ್ಳಿಕರ್, ಮಲ್ಲಿಕಾರ್ಜುನ ಮಾವನೂರ ಸೇರಿದಂತೆ ಪ್ರವಚನ ಸೇವಾ ಸಮಿತಿ ಸದಸ್ಯರು ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular