ಶಾಸಕ ರಾಜುಗೌಡರ ತಾಯಿ ತಿಮ್ಮಮ್ಮ ನಿಧನ

0
232

ಸುರಪುರ: ಸ್ಥಳಿಯ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರ ತಾಯಿ ತಿಮ್ಮಮ್ಮ ಶಂಭನಗೌಡ ನಾಯಕ ಅವರು ಸೋಮವಾರ ಬೆಳಿಗ್ಗೆ ೯ ಗಂಟೆಗೆ ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ ೬೪ ವರ್ಷ ವಯಸ್ಸಾಗಿತ್ತು.ಕಳೆದ ಕೆಲ ದಿನಗಳಿಂದ ಪಾರ್ಶ್ವವಾಯುನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

೨೦೦೪ರ ಚುನಾವಣೆಯಲ್ಲಿ ಶಾಸಕ ರಾಜುಗೌಡ ಅವರು ಕನ್ನಡ ನಾಡು ಪಕ್ಷದಿಂದ ಪ್ರಥಮ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಅವರ ಗೆಲುವಿನಲ್ಲಿ ಮಹತ್ತರವಾದ ಪಾತ್ರವಹಿಸಿದ್ದರು.ಇಡೀ ಕ್ಷೇತ್ರದ ಅನೇಕ ಕಡೆಗಳಲ್ಲಿ ಮಗನಿಗಾಗಿ ಪಾದಯಾತ್ರೆ ನಡೆಸಿ ಪ್ರಚಾರ ನಡೆಸುವ ಮೂಲಕ ಗೆಲುವು ತಂದು ಕೊಟ್ಟಿದ್ದರು.

Contact Your\'s Advertisement; 9902492681

ಮೃತರು ಪತಿ ಶಂಭನಗೌಡ ನಾಯಕ ಹಾಗು ಇಬ್ಬರು ಗಂಡು ಮಕ್ಕಳಾದ ರಾಜುಗೌಡ ಮತ್ತು ಹಣಮಂತ ನಾಯಕ (ಬಬ್ಲುಗೌಡ) ಒಬ್ಬಳು ಮಗಳಾದ ಚೈತ್ರಾ ಅವರನ್ನು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ತಿಮ್ಮಮ್ಮನವರ ನಿಧನದಿಂದಾಗಿ ತಾಲೂಕಿನಲ್ಲಿಯ ರಾಜುಗೌಡರ ಬೆಂಬಲಿಗರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಇವರ ನಿಧನಕ್ಕೆ ಹುಣಸಿಹೊಳೆ ಕಣ್ವಾಮಠದ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಪಾದಂಗಳವರು,ದೇವಾಪುರ ಜಡಿಶಾಂತಲಿಂಗೇಶ್ವರ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಕೂಡಲಗಿ ಶಾಂತಾನಂದ ಸರಸ್ವತಿ ಬಾಬಾ ಮಹಾರಾಜರ ಮಠದ ಸಿದ್ದರಾಜ ಮಹಾರಾಜರು,ಲಕ್ಷ್ಮೀಪುರ ಶ್ರೀಗಿರಿ ಮಠದ ಬಸವಲಿಂಗ ದೇವರು,ನಿಷ್ಠಿ ಕಡ್ಲೆಪ್ಪನವರ ಮಠದ ಶ್ರೀಪ್ರಭುಲಿಂಗ ಮಹಾಸ್ವಾಮೀಜಿ,ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ, ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ,ಸುರೇಶ ಸಜ್ಜನ,ರಾಜಾ ಹನಮಪ್ಪ ನಾಯಕ (ತಾತಾ),ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ,ರಂಗನಗೌಡ ದೇವಿಕೇರಾ,ದೊಡ್ಡದೇಸಾಯಿ ದೇವರಗೋನಾಲ,ಧರ್ಮರಾಜ ಬಡಿಗೇರ,ನರಸಿಂಹಕಾಂತ ಪಂಚಮಗಿರಿ,ಮರೆಪ್ಪ ಹವಲ್ದಾರ,ಶೇಖಪ್ಪ ಕುಂಬಾರ ಜಾಲಿಬೆಂಚಿ,ಬಸವರಾಜ ಕುಂಬಾರ, ಜೆಡಿಎಸ್ ಅಧ್ಯಕ್ಷ ಮಲ್ಲಯ್ಯ ಕಮತಗಿ, ವೆಂಕಟೇಶ ಭಕ್ರಿ,ಉಸ್ತಾದ ವಜಾಹತ್ ಹುಸೇನ,ವೆಂಕೋಬ ದೊರೆ, ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ವತಿಯಿಂದ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here