ಯಾದಗಿರಿ: ಡಾ.ಅಂಬೇಡ್ಕರ್ ನಿಗಮದ ಭ್ರಷ್ಟಾಚಾರ ಖಂಡಿಸಿ ಧರಣಿ

0
54

ಯಾದಗಿರಿ: ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿನ ವ್ಯಾಪಕ ಭ್ರಷ್ಟಾಚಾರವನ್ನು ಖಂಡಿಸಿ ಹಾಗೂ ಹಗರಣಗಳನ್ನು ಸಿಓಡಿ ತನಿಖೆ ನಡೆಸುವಂತೆ ಆಗ್ರಹಿಸಿ ಕೇಂದ್ರ ಕಚೇರಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಏಕಕಾಲಕ್ಕೆ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಡಾ : ಬಿ ಆರ್ ಅಂಬೇಡ್ಕರ್ ನಿಗಮದಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಿರಂರವಾಗಿ ಮುಂದುವರೆದಿದ್ದು ನಮ್ಮ ಆಸೆಯ ಗಳಿಗೆ ದಕ್ಕೆ ಆಗುತ್ತಿರುವದನ್ನು ಮನಗೊಂಡು ನಾವು ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿರುತ್ತೇವೆ. ರಾಜ್ಯದ ಕೇಂದ್ರ ಕಚೇರಿ ಸೇರಿದಂತೆ ವಿವಿಧ ಜಿಲ್ಲೆಗಳ ವ್ಯವಸ್ಥಾಪಕರ ಲಂಚಗುಳಿತನ ಬಯಲಾಗಿದ್ದುˌ ಅಂತ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆಗೆ ಒಳಪಡಿಸಬೇಕು ಮತ್ತು ವ್ಯವಸ್ಥಾಪಕರನ್ನು ಎಸಿಬಿ ಬಲೆಗೆ ಸಿಲಿಕಿಸುವ ಸಂಚು ಕೂಡಾ ಬಯಲಾಗಿದೆ. ಈ ಎಲ್ಲ ಅನ್ಶಾಯ ವಿರುದ್ಧ ಹಾಗೂ ಭ್ರಷ್ಟರ ಹಗರಣಗಳನ್ನು ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ಈ ಕೆಳಕಂಡ ಹಕ್ಕುತ್ತಾಯಗಳನ್ನು ಇಡೇರಿಸಬೇಕೆಂದು ಈ ಮೂಲಕ ಒತ್ತಾಯಿಸಲಾಯಿತು. ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಶಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಎಮ್ ಮಹಾದೇವ ದಿಗ್ಗಿ ಜಿಲ್ಲಾ ಎಸ್ ಎಸ್ ಡಿ ಜಿಲ್ಲಾ ಅಧ್ಯಕ್ಷರುˌ ಕಾಶೀಪತಿ ಎಸ್ ಬಡಿಗೇರ್ˌ ಭೀಮಣ್ಣ ಕನ್ಯಾಕೋಳೂರˌ ಅರುಣಕುಮಾರ. ಎಮ್. ಸೈದಾಪುರˌ ಶಿವುಕುಮಾರ ನಾಟೇಕಾರˌ ನಿಂಗಣ್ಣ ಕಸನ್ˌ
ಚಂದ್ರು ಕಸನ್ˌ ಮಾಹಾಂತೇಶˌ ಅಂಬ್ರೆಷ್ ದಿಗ್ಗಿˌ ಮರೆಪ್ಪ ದಿಗ್ಗಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here