ಪಡಿತರ ವಿತರಕ ಚಟ್ಟಂಗೆರೆ ಲಕ್ಷ್ಮೀಪತಿ ಅವರ ಕುಟುಂಬಕ್ಕೆ ಸಹಾಯ ಧನ ವಿತರಣೆ

0
54

ವರದಿ: ಮೋಹನ್ ಮದ್ದೂರು ಮಂಡ್ಯ

ಮಂಡ್ಯ: ಜಿಲ್ಲಾ ಪಡಿತರ ವಿತರಕರ ಸಂಘದ ಕೃಷ್ಣರಾಜಪೇಟೆ ತಾಲ್ಲೂಕು ಘಟಕದ ವತಿಯಿಂದ ಇತ್ತೀಚಿಗೆ ಹೃದಯಾಘಾತದಿಂದ ನಿಧನರಾದ ಕೃಷ್ಣರಾಜಪೇಟೆ ತಾಲ್ಲೂಕಿನ ಚಟ್ಟಂಗೆರೆ ಸರ್ಕಾರಿ ನ್ಯಾಯಬೆಲೆ ಅಂಗಡಿಯ ಮಾಲೀಕನ ಕುಟುಂಬಕ್ಕ ಸಹಾಧನ ವಿತರಣೆ ಮಾಡಲಾಯಿತು.

Contact Your\'s Advertisement; 9902492681

ಲಕ್ಷ್ಮೀಪತಿ ಅವರ ಧರ್ಮಪತ್ನಿ ಭಾಗ್ಯಮ್ಮ ಅವರಿಗೆ ಜಿಲ್ಲಾ ಪಡಿತರ ವಿತರಕರ ಸಂಘದಿಂದ 10ಸಾವಿರ ರೂಪಾಯಿ ಸಹಾಯ ಧನವನ್ನು ರಾಜ್ಯ ಉಪಾಧ್ಯಕ್ಷ ಡಾ.ಅಂಚನಹಳ್ಳಿ ಸುಬ್ಬಣ್ಣ ವಿತರಿಸಿ, ಕುಟುಂಬಕ್ಕೆ ಸಾಂತ್ವಾನ ಹೇಳಿದ್ದರು.

ಈ ಸಂದರ್ಭದಲ್ಲಿ ತಾಲ್ಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಬಣ್ಣೇನಹಳ್ಳಿ ಶಿವಣ್ಣ, ತಾಲ್ಲೂಕು ಪಂಚಾಯತಿ ಸದಸ್ಯ ಎನ್.ಕೆ.ನಿಂಗೇಗೌಡ, ತೆಂಡೇಕೆರೆ ಗ್ರಾಮ ಪಂಚಾಯತಿ ಸದಸ್ಯ ಯಶೋಧರ, ಲಕ್ಷ್ಮೀಪತಿ ಅವರ ಪುತ್ರ ವಿಜಯಕಿರಣ್, ಮಲ್ಕೋನಹಳ್ಳಿ ಅಣ್ಣಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಂಕಷ್ಟದ ಸಮಯದಲ್ಲಿ ನೊಂದ ಕುಟುಂಬಕ್ಕೆ ಸಹಾಯ ಹಸ್ತ ನೀಡಿದ ಪಡಿತರ ವಿತರಕರ ತಾಲ್ಲೂಕು ಸಂಘದ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here