ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಹೆಸರಿಡಲು ಆಗ್ರಹ

0
323

ಸುರಪುರ: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ದಕ್ಷಿಣ ಭಾರತದ ನೇತೃತವ ವಹಿಸಿದವರು ಸುರಪುರ ಅರಸು ನಾಲ್ವಡಿ ರಾಜಾ ವೆಂಕಟಪ್ಪ ನಾಯಕರು.ಇಂತಹ ಅರಸರ ಹೆಸರನ್ನು ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಇಡುವಂತೆ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮುಖಂಡರು ಆಗ್ರಹಿಸಿದರು.

ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ಸರಕಾರಗಳು ರಾಜಾ ವೆಂಕಟಪ್ಪ ನಾಯಕರ ಇತಿಹಾಸವನ್ನು ಜಗತ್ತಿಗೆ ತಿಳಿಸುವ ಕೆಲಸ ಮಾಡಬೇಕಿದೆ.ಇವರ ಇತಿಹಾಸವನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು.ಅಲ್ಲದೆ ನೂತನವಾಗಿ ಕಾರ್ಯಾರಂಭ ಮಾಡಿರುವ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಹೆಸರನ್ನು ಇಡಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುವುದು ಎಂದು ಎಚ್ಚರಿಸಿದರು.ಇದೇ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ತಕ್ಷಣ ಮಂಜೂರು ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಸಿದ್ದನಗೌಡ ಪಾಟೀಲ,ತಾಲೂಕು ಅಧ್ಯಕ್ಷ ಗಂಗಾಧರ ನಾಯಕ,ಕಾರ್ಯಾಧ್ಯಕ್ಷ ರಮೇಶ ದೊರೆ,ಪ್ರಧಾನ ಕಾರ್ಯದರ್ಶಿ ವೆಂಕಟೇಶ ಬೇಟೆಗಾರ,ವಲಯ ಅಧ್ಯಕ್ಷ ಭೀಮಣ್ಣ (ಮೂಕಪ್ಪ) ಬಿಚಗತ್ತಿಕೇರಾ,ತಾಲೂಕು ಖಜಾಂಚಿ ಪರಶುರಾಮ ಮಲ್ಲಿಬಾವಿ,ಉಪಾಧ್ಯಕ್ಷ ಸೋಮನಾಥ ಡೊಣ್ಣಿಗೇರಾ,ಷಣ್ಮುಖ ನಾಯಕ ಪ್ಯಾಪ್ಲಿ,ದುರ್ಗಪ್ಪ ನಾಯಕ ಡೊಣ್ಣಿಗೇರಾ,ಅನಿಲ್ ಕುಮಾರ ಇಟ್ಟಂಗಿ,ದೇವರಾಜ ನಾಯಕ ಗಿರಣಿ,ಶಿವಮೋನಯ್ಯ ನಾಯಕ,ಬಸವರಾಜ ದೊರೆ ಹೆಮ್ಮಡಗಿ,ಬಸವರಾಜ ದೊರೆ ವಾಗಣಗೇರಾ,ವೆಂಕಟೇಶ ಕೊದಡ್ಡಿ,ಶರಣು ನಾಯಕ ತಳ್ಳಳ್ಳಿ,ಪರಶುರಾಮ ಮಂಗಿಹಾಳ,ಹಣಮಂತ ಮಲ್ಲಿಬಾವಿ,ನಾಗೇಂದ್ರ ದೊರೆ ಚಂದ್ಲಾಪುರ,ರಾಘವೇಂದ್ರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here