ಮಕ್ಕಳ ದೇವರ ಆಟದಲ್ಲಿ ಒಕ್ಕರಿಸಿಕೊಂಡ ಮಂಡ್ಯ ಕ್ಷೇತ್ರದ ಫಲಿತಾಂಶ. ನಗೆ ಚಟಾಕಿ ವಿಡಿಯೋ ಫುಲ್ ವೈರಲ್.

0
1028

ವರದಿ: ಮೋಹನ ಮದ್ದೂರ

ಮಂಡ್ಯ: ಮಂಡ್ಯ ಫಲಿತಾಂಶದ ಕುರಿತ ಝಲಕ್ ನೀಡುವಂತಹ ಮಕ್ಕಳ ದೇವರ ಆಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

Contact Your\'s Advertisement; 9902492681

ಮೈ ಮೇಲೆ ದೇವರು ಬಂದಂತೆ ಮಂಡ್ಯ ತಾಲೂಕಿನ ಲೋಕಸರ ಗ್ರಾಮದ ಚಿಕ್ಕ ಮಕ್ಕಳ ದೇವರ ಆಟದ ಮಾತುಗಳು ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

ಮಂದಿರ ಗುಡಿಯ ಹತ್ತಿರ ವಿರುವ ವಿಡಿಯೋದಲ್ಲಿ ಒಂದು ಮಗು ಮೈ ಮೇಲೆ ದೇವರು ಬಂದಂತೆ ಕುಣಿಯುತ್ತ, ಬಂದು ಭಕ್ತರ ಮಧ್ಯೆ ನಿಲ್ಲುತಾನೆ. ಭಕ್ತ ಬಂದು ನಿನ್ ಮೈಯಾಗ, ನಿಖಿಲ್, ಸುಮಲತಾ, ಎಂದು ಕೇಳುತಾನೆ. ಮೈ ಮೇಲೆ ದೇವರು ಬಂದಂತೆ ನಟಿಸಿದ ಮಗು ಸುಮಲತ ಎಂದು ಗದರಿಸುವ ಮೂಲಕ ಕುಣಿಯುತ್ತ, ಹೋಗುತ್ತಾನೆ. 24 ಸೆಂಕಡ್ ನ ಈ ವಿಡಿಯೋ ನಗೆ ತರಿಸುತ್ತದೆ.

ದೇಶದ ಹಾಗೂ ರಾಜ್ಯದ ಗಮನವೇ ತನ್ನತ್ತ, ಸೆಳೆದುಕೊಂಡಿದ್ದು, ಮಂಡ್ಯ ಕ್ಷೇತ್ರ ಲೋಕಸಭೆ ಚುನಾವಣೆ ಇದೀಗ ಮಕ್ಕಳ ಆಟಗಳಲ್ಲಿಯೂ ಒಕ್ಕರಿಸಿಕೊಂಡದ್ದು, ಈ ವಿಡಿಯೋನಲ್ಲಿ ನೋಡಬಹುದು.

ಮಂಡ್ಯ ಲೋಕ ಸಮರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖೀಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರ ನಟ,ಮಾಜಿ ಸಚಿವ ದಿ.ಅಂಬರೀಶ ಅವರ ಪತ್ನಿ ಸುಮಲತಾ ಅಂಬರೀಶ ಅವರ ಮಧ್ಯೆ ನೇರ ಸ್ಪರ್ಧೆ ಇದ್ದು, ರಾಜ್ಯದ ಬಹುತೇಕ ಮಾಧ್ಯಮ ಹಾಗೂ ಸ್ಯಾಂಡ್ ವುಡ್ ವುಡ್ ಜಗತ್ತೆ ಚುನಾವಣೆ ಪ್ರಚಾರದಲ್ಲಿ ಈ ಕ್ಷೇತ್ರಕ್ಕೆ ಲಗ್ಗೆ ಇಟ್ಟಿತು.

ಇನ್ನೂ ಮೇ 23 ಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ, ಮಂಡ್ಯೆ ಲೋಕ ಸಭಾ ಕ್ಷೇತ್ರ ಯಾರ ಮಡಲಿಗೆ ಬಿಳಲಿದೆ ಎಂಬುದು ಮಂಡ್ಯ ಕ್ಷೇತ್ರ ಹಾಗೂ ರಾಜ್ಯದ ಜನರಲ್ಲಿ ಕುತೂಹಲ ಮನೆ ಮಾಡಿದೆ.

ಈ ವಿಡಿಯೋ ಕೇವಲ ಮಕ್ಕಳ ಆಟಕ್ಕೆ ಸಿಮಿತವಾಗಿದ್ದು, ಯಾವುದೇ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿ ಪರವಾಗಿ ನೋಡದೆ, ನಗೆ ಚಟಾಕಿಯಾಗಿ ಸ್ವೀಕರಿಸಲು ಇ-ಮಿಡಿಯಾ ಲೈನ್ ಇಲ್ಲಿ ಪ್ರಸಾರ ಮಾಡುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here