ಯೋಜನೆಗಳನ್ನು ಸದುಯೋಗಪಡಿಸಿಕೊಳ್ಳಿ: ಶಿನ್ನಾಳಕರ್

0
29

ಕಲಬುರಗಿ: ಭೂ ಒಡೆತನ ಯೋಜನೆ ಉತ್ತಮ ಯೋಜನೆಯಾಗಿದ್ದು, ನಿಜವಾದ ಫಲಾನುಭವಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ ಶಿನ್ನಾಳಕರ್ ಹೇಳಿದರು.

ನಗರದ ರಾಮ ಮಂದಿರ ರಸ್ತೆಯಲ್ಲಿರುವ ಹರಳಯ್ಯ ಸಮುದಾಯ ಭವನದಲ್ಲಿ ದಲಿತರಿಗೆ ನೀಡಲಾಗುತ್ತಿರುವ ಭೂ ಒಡೆತನ ಯೋಜನೆಯ ಮಂಜೂರಾತಿ ಪತ್ರಗಳನ್ನು ವಿತರಿಸಿ ಮಾತನಾಡಿದರು. ದೂರದ ಬೆಂಗಳೂರಿಗೆ ಬಂದು ಭೂ ಒಡೆತನ ಯೋಜನೆಯ ಮಂಜೂರಾತಿ ಪಡೆಯಬೇಕಿಲ್ಲ, ನಮ್ಮ ಕೇಂದ್ರ ಕಛೇರಿಯ ಸಿಬ್ಬಂದಿಗಳನ್ನು ಇಲ್ಲಿಗೆ ಕರೆಯಿಸಿ ಸ್ಥಳದಲ್ಲಿಯೇ ಮಂಜೂರಾತಿ ಕೊಡಿಸಲಾಗುವುದು. ಫಲಾನುಭವಿಗಳು ಬಡವರಾಗಿದ್ದರಿಂದ ಸಾವಿರಾರು ರೂ. ಖರ್ಚು ಮಾಡಿ ಕೇಂದ್ರ ಕಛೇರಿಗೆ ಬರುವ ಅವಶ್ಯಕತೆ ಇಲ್ಲ ಎಂದರು.

Contact Your\'s Advertisement; 9902492681

ಅರ್ಜಿ ಹಾಕಿದ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಜಿಲ್ಲೆಯಲ್ಲಿಯೇ ಭೂ ಮಂಜೂರಾತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿರುವ ವಿಷಯ ಪರೀಕ್ಷಕರನ್ನು ಜಿಲ್ಲೆಯಲ್ಲಿಯೇ ಕರೆಸಿ ಶೀಘ್ರವಾಗಿ ಎಲ್ಲ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಿಕೊಡಲಾಗುವುದು ಎಂದರು. ಬಡವರನ್ನು ಗುರಿಯಾಗಿಸಿಕೊಂಡು ಯಾರಾದರೂ ಜಮೀನು ಕೊಡಿಸುತ್ತೇನೆಂದು ಹಣ ಪಡೆದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರತಿಯೊಂದು ಕೆಲಸಕ್ಕೂ ಬೆಂಗಳೂರು ಕಡೆ ಕೈ ತೋರಿಸುವುದಕ್ಕಿಂತಲೂ ನಾವೇ ಜನರ ಬಳಿ ಹೋಗಿ ಜಮೀನು ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಜಿಲ್ಲೆಯ ವ್ಯವಸ್ಥಾಪಕರುಗಳು ಜನರ ಕೆಲಸ ಮಾಡಲು ನಿರಾಸಕ್ತಿ ತೋರಿಸಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು.

ಅಲ್ಲದೆ ಕೆಲವು ಜಿಲ್ಲೆಯ ವ್ಯವಸ್ಥಾಪಕರ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಕಲ್ಯಾಣ ಕರ್ನಾಟಕಕ್ಕೆ ಬಂದು ಕೆಲಸ ಮಾಡುವವರು ಕಡಿಮೆಯಾದ ಸಂದರ್ಭದಲ್ಲಿಯೂ ಬೆಂಗಳೂರಿನ ಸಿಬ್ಬಂದಿ ಕಲಬುರಗಿಗೆ ಬಂದು ಕೆಲಸ ಮಾಡುತ್ತಿರುವ ಕಾರ್ಯ ಅವರಿಗಿರುವ ಬದ್ಧತೆಯನ್ನು ತೋರಿಸುತ್ತಿದೆ ಎಂದರು. ಇದೇ ವೇಳೆ ಉತ್ತಮವಾಗಿ ಕೆಲಸ ಮಾಡಿದ ಸಿಬ್ಬಂದಿಗಳಿಗೆ ಫಲಾನುಭವಿಗಳು ಸನ್ಮಾನಿಸಿದರು. ಪ್ರಧಾನ ವ್ಯವಸ್ಥಾಪಕಿ ಕವಿತಾ ವಾರಂಗಲ್, ಉಪ ಪ್ರಧಾನ ವ್ಯವಸ್ಥಾಪಕ ಹರ್ಷಾ ಗಾವಕರ್, ಜಿಲ್ಲಾ ವ್ಯವಸ್ಥಾಪಕ ಮುನಾವರ ದೌಲಾ, ಕೇಂದ್ರ ಕಛೇರಿಯ ಸಿಬ್ಬಂದಿಗಳಾದ ನಿರ್ಮಲಾ, ವೆನಿಲ್ಲಾ, ನಿಗಮದ ಕಾನೂನು ಸಲಹೆಗಾರ ವಿರಭದ್ರಯ್ಯ, ಸಿಬ್ಬಂದಿಗಳಾದ ದೇವರಾಜ ಕೆ, ಸಂಜಯಕುಮಾರ, ಮಹೇಶ, ಶ್ರೀನಿವಾಸ ಶಹಾಬಾದ ಸೇರಿದಂತೆ ವಿಭಾಗದ ಎಲ್ಲ ಜಿಲ್ಲೆಯ ವ್ಯವಸ್ಥಾಪಕರು ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here